ಮಡಿಕೇರಿ, ಮೇ ೧೭: ಕಾಡಾನೆ ದಾಂಧಲೆಯಿAದ ಮನೆಗೆ ಹಾನಿಯಾದ ಘಟನೆ ಹಾದ್ರೆ ಹೇರೂರು ಗ್ರಾಮದಲ್ಲಿ ನಡೆದಿದೆ.

ಅಲ್ಲಿನ ಚೆಲುವಯ್ಯ ಎಂಬವರ ಮನೆ ಮುಂಭಾಗಕ್ಕೆ ಲಗ್ಗೆಯಿಟ್ಟ ಕಾಡಾನೆ ಬಾಳೆ ಫಸಲು ನಾಶ ಮಾಡಿ, ಮನೆಯ ಅಂಗಳದಲ್ಲಿದ್ದ ಹಲಸಿನ ಮರದ ಮೇಲೆ ದಾಳಿ ಮಾಡಿ ಬೀಳಿಸಿದ ಪರಿಣಾಮ ಇಡೀ ಮರ ಮನೆಯ ಮೇಲೆ ಬಿದ್ದಿದೆ. ಇದರಿಂದ ಮನೆ ಮಾಲೀಕರಿಗೆ ಅಪಾರ ನಷ್ಟ ಸಂಭವಿಸಿದೆ.