ಸಿದ್ದಾಪುರ, ಮೇ ೧೮: ಹಾಡಹಗಲೇ ಕಾಡಾನೆಯೊಂದು ಕಾರಿನ ಮೇಲೆ ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊAಡಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದ ಮಠದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮಠ ನಿವಾಸಿ ಚೆಲ್ಲಪ್ಪ ಎಂಬವರು ಶುಕ್ರವಾರದಂದು ಕೆಲಸದ ನಿಮಿತ್ತ ಸಿದ್ದಾಪುರಕ್ಕೆ ತೆರಳಿ ಹಿಂತಿರುಗಿ ಮಧ್ಯಾಹ್ನ ೧೨ ಗಂಟೆಗೆ ತಮ್ಮ ಮನೆಗೆ ಕಾರಿನಲ್ಲಿ ಬರುತ್ತಿರುವ ಸಂದರ್ಭದಲ್ಲಿ ಚೌಡಿಕಾಡು ಕಾಫಿ ತೋಟದ ಬಳಿ ಏಕಾಏಕಿ ಕಾಡಾನೆ ಕಾರಿಗೆ ದಾಳಿ ನಡೆಸಿದೆ.

ಅದೃಷ್ಟವಶಾತ್ ಕಾರಿನ ಮಾಲೀಕ ಅಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು ದಾಂಧಲೆ ನಡೆಸುತ್ತಿದೆ. ಘಟನೆಗೆ ಸಂಬAಧಿಸಿ ಕಾರು ಮಾಲೀಕ ಚೆಲ್ಲಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. -ವರದಿ ವಾಸು