ಕೂಡಿಗೆ, ಮೇ ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪುರಸಭೆಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಈಗಾಗಲೇ ಸಿದ್ದಗೊಂಡು ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ರೂ. ೩.೨೧ ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕದಲ್ಲಿರುವ ತ್ಯಾಜ್ಯ ನಿರ್ವಹಣೆಗೆ ಸಂಬAಧಿಸಿದAತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟೆಂಡರ್ ಪ್ರಕ್ರಿಯೆಯು ನಡೆದಿದೆ. ವಿವಿಧ ಹಂತಗಳ ಕಾಮಗಾರಿಗಳು ಶೀಘ್ರವಾಗಿ ಆರಂಭಗೊAಡು ಪೂರ್ಣಗೊಳಿಸಲಾಗುವುದು ಎಂದು ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಭುವನಗಿರಿಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಪೂರಕವಾದ ವಿವಿಧ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳ ಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ಹಣವು ಹಂತ ಹಂತವಾಗಿ ಬಿಡುಗಡೆಗೊಂಡು ಭುವನಗಿರಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ನೂತನವಾಗಿ ಕಸ ವಿಲೇವಾರಿಗೆ ಸಂಬAಧಿಸಿದ ಶೆಡ್ ನಿರ್ಮಾಣ ಮತ್ತು ಒಣ ಕಸ ಮತ್ತು ಹಸಿ ಕಸಗಳ ಬೇರ್ಪಡಿಸುವ ನೂತನ ತಂತ್ರಜ್ಞಾನದ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಬೃಹತ್ ನಗರಗಳಲ್ಲಿ ಕಸ ವಿಲೇವಾರಿಗೆ ಸಂಬAಧಿಸಿದAತೆ ಅಳವಡಿಕೆ ಮಾಡಲಾಗಿರುವ ವಿವಿಧ ವಿನ್ಯಾಸ ಅಧುನಿಕ, ಅಂತರರಾಷ್ಟಿçÃಯ ತಂತ್ರಜ್ಞಾನದ ಯಂತ್ರಗಳ ಅಳವಡಿಸುವ ಯೋಜನೆಗೆ ಪೂರಕವಾಗಿ ವಿವಿಧ ಟೆಂಡರ್ ಪ್ರಕ್ರಿಯೆಗಳು ನಡೆದಿವೆ. ಅದರ ಅನುಗುಣವಾಗಿ ಕಾಮಗಾರಿಗಳು ಭುವನಗಿರಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ನಡೆಯುತ್ತಿವೆ ಎಂದರು.

ಕುಶಾಲನಗರ ಪುರಸಭೆಯ ಮಾಸಿಕ ಸಭೆಯ ತೀರ್ಮಾನದಂತೆ ನೂತನ ಕಸ ವಿಲೇವಾರಿ ಯಂತ್ರಗಳ ಜೋಡಣೆ ಮತ್ತು ಒಣ ಕಸವನ್ನು ಸಿಮೆಂಟ್ ಕಾರ್ಖಾನೆಗಳಿಗೆ ಸಾಗಾಟ ಮಾಡುವ ಮತ್ತು ಕಸದಿಂದ ಸ್ಥಳೀಯ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ದೃಷ್ಟಿಯಿಂದ ಕಾಮಗಾರಿಗಳು ನಡೆಯುತ್ತಿವೆ ಎಂದು ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಇಲ್ಲಿಯೇ ಕಸ ವಿಲೇವಾರಿ ಯಾಗುತ್ತಿರುವ ಹಿನ್ನೆಲೆ ಬೃಹತ್ ಪ್ರಮಾಣದ ತ್ಯಾಜ್ಯ ತುಂಬಿ ಸಮಸ್ಯೆಯಾಗಿತ್ತು.

ಪ್ರಮುಖವಾಗಿ ಕಳೆದ ೧೫ ವರ್ಷಗಳ ಹಿಂದೆ ಗುಡ್ಡೆ ಹಾಕಿರುವ ಪಾರಂಪರಿಕ ಕಸವನ್ನು ಬೇರ್ಪಡಿಸಿ ನೂತನ ಯಂತ್ರಗಳ ಪ್ಲಾಸ್ಟಿಕ್ ಅನ್ನು ನೀರಿನ ರೂಪ ಮಾಡುವ ಮೂಲಕ ಹೊಸ ಪ್ಲಾಸ್ಟಿಕ್ ಹೊದಿಕೆ ತಯಾರಿಸುವ ಯೋಜನೆ ರೂಪಿಸ ಲಾಗಿದೆ. ಜೊತೆಯಲ್ಲಿ ಕಾರ್ಮಿಕರ ಕೊಠಡಿ, ಶೌಚಾಲಯ, ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಕಸ ವಿಲೇವಾರಿಗೆ ಸಂಬAಧಿಸಿದAತೆ ಶೆಡ್ ನಿರ್ಮಾಣ, ಸೇರಿದಂತೆ ಅನೇಕ ಕಾಮಗಾರಿಗಳು ಪ್ರಗತಿಯತ್ತ ಸಾಗುತ್ತಿವೆ. ಈಗಾಗಲೇ ನೂತನ ಕಸ ವಿಲೇವಾರಿ ಯಂತ್ರಗಳ ಅಳವಡಿಸಲು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಅಧುನಿಕ ನೂತನ ಮಾದರಿಯ ಯಂತ್ರಗಳ ಅಳವಡಿಸುವ ಕಾರ್ಯದೊಂದಿಗೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ಬೃಹತ್ ಯೋಜನೆ ಯನ್ನು ಕಾರ್ಯಗತಗೊಳಿಸಲು ಕಾರ್ಯೊನ್ಮುಖರಾಗಿದ್ದೇವೆ. ಪುರಸಭೆಯ ವಿಶೇಷ ಅನುದಾನ ವನ್ನು ಬಳಕೆ ಮಾಡಿಕೊಂಡು ಕಸ ವಿಲೇವಾರಿ ಘಟಕದ ಗೇಟ್‌ನ ಮುಂದಿನ ಗ್ರಾಮಗಳಿಗೆ ಅನುಕೂಲ ವಾಗುವಂತೆ ನೂತನವಾಗಿ ಎರಡು ಕಿಲೋಮೀಟರ್ ರಸ್ತೆಯ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವ ಕಾರ್ಯಯೋಜನೆ ಇದೆ. ಟೆಂಡರ್ ಪ್ರಕ್ರಿಯೆಯು ನಡೆದಿದೆ. ಮುಂದಿನ ದಿನಗಳಲ್ಲಿ ಅತಿ ಶೀಘ್ರವಾಗಿ ಭುವನಗಿರಿ ಕಸ ವಿಲೇವಾರಿ ಘಟಕದ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿ ಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ