ಕಣಿವೆ, ಮೇ ೧೮: ಕುಶಾಲನಗರ ೨೩೦/ ೬೬/೧೧ ಕೆ.ವಿ ವಿದ್ಯುತ್ ಉಪ ಕೇಂದ್ರದಿAದ ಹಾದುಹೋಗುವ ೧೧ ಕೆ.ವಿ. ಈ ೩ ನಂಜರಾಯಪಟ್ಟಣ ವಿದ್ಯುತ್ ಮಾರ್ಗದ ತ್ರೆöÊಮಾಸಿಕ ಹಾಗೂ ತುರ್ತು ನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿAದ ತಾ.೧೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ನಂಜರಾಯಪಟ್ಟಣ ಪಂಚಾಯತಿ ವ್ಯಾಪ್ತಿಯ ರಂಗಸಮುದ್ರ, ಹೊಸಪಟ್ಟಣ, ವಿರೂಪಾಕ್ಷಪುರ, ವಾಲ್ನೂರು ತ್ಯಾಗತ್ತೂರು ತಾವರೆಕೆರೆ, ಪಾಲಿಟೆಕ್ನಿಕ್ ಎದುರು, ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಎಸ್. ಮಂಜುನಾಥ್ ಕೋರಿದ್ದಾರೆ.