ಕರಿಕೆ, ಮೇ ೧೯: ಗ್ರಾಮದ ದೇವರಾದ ಶ್ರೀ ವನಶಾಸ್ತಾವು ಹಾಗೂ ಕರಿ ಚಾಮುಂಡಿ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ತಾ.೨೦, ೨೧ ರಂದು ದೇವಸ್ಥಾನದ ತಂತ್ರಿಗಳಾದ ಕಾಸರಗೋಡು ವೇದಮೂರ್ತಿ ಶ್ರೀ ಶ್ರೀಪತಿ ಅರಳಿತ್ತಾಯ ಅವರ ನೇತೃತ್ವದಲ್ಲಿ ನಡೆಯಲಿದ್ದು, ನಂತರ ಕರಿಚಾಮುಂಡಿ ಹಾಗೂ ಗುಳಿಗ ದೈವಗಳ ಕೋಲ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.