ಕುಶಾಲನಗರ, ಮೇ ೧೯: ಕುಶಾಲನಗರ ಬೈಚನಹಳ್ಳಿಯ ಶ್ರೀ ವನದುರ್ಗ ಆದಿಶಕ್ತಿ ಅಂತರಘಟ್ಟ ಅಮ್ಮನವರ ೯ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಆದಿಶಕ್ತಿ ಅಂತರಘಟ್ಟ ಅಮ್ಮ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಲಯದಲ್ಲಿ ಬೆಳಿಗ್ಗೆ ಗಣಪತಿ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ, ನವಕ ಪೂಜೆ ನಂತರ ಶ್ರೀದೇವಿಗೆ ಪಂಚಾಮೃತ ಅಭಿಷೇಕ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದವು.

ಅರ್ಚಕರಾದ ಕೃಷ್ಣಮೂರ್ತಿ ಭಟ್, ಉಮೇಶ್ ಭಟ್, ಗಿರೀಶ್ ಭಟ್ ಮತ್ತು ದೇವಾಲಯದ ಅರ್ಚಕರಾದ ಬಿ.ಸಿ. ಸ್ವಾಮಿ ಅವರುಗಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳು ಜರುಗಿದವು. ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ದೇವಾಲಯಕ್ಕೆ ಫಲ ತಾಂಬೂಲಗಳೊAದಿಗೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.

ದೇವಾಲಯ ಸಮಿತಿಯ ಗೌರವ ಅಧ್ಯಕ್ಷ ಬಿ.ಸಿ. ಗೋವಿಂದರಾಜ್, ಅಧ್ಯಕ್ಷ ವಿ. ಗಿರೀಶ್, ಉಪಾಧ್ಯಕ್ಷ ಬಿ.ಎಸ್. ಗಣೇಶ್ ಕಾರ್ಯದರ್ಶಿ ಬಿ.ವಿ. ಜಗದೀಶ್, ಸಹಕಾರ್ಯದರ್ಶಿ ಬಿ.ಎಸ್. ರವಿಕುಮಾರ್ ಖಜಾಂಚಿ ವಿ.ಡಿ. ಜಗದೀಶ್ ಮತ್ತಿತರರು ಇದ್ದರು.