ಶನಿವಾರಸಂತೆ, ಮೇ ೧೯: ಸಮೀ ಪದ ಗುಡುಗಳಲೆ ಜಾತ್ರ ಮೈದಾನದಲ್ಲಿ ರುವ ಶ್ರೀ ಕಾಳಿಕಾಂಬ ದೇವಾಲಯ ದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಕಾಳಿಕಾಂಬ ದೇವಿಯ ೯ನೇ ವಾರ್ಷಿ ಕೋತ್ಸವ, ಸಾಮೂಹಿಕ ಉಪನಯನ, ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಚಿಕ್ಕ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ತಾ.೨೨ ರಂದು ಬುಧ ವಾರ ನಡೆಯಲಿದೆ. ಅಂದು ಬೆಳಿಗ್ಗೆ ೫ ಗಂಟೆಯಿAದ ಗಣಪತಿ ಪೂಜೆ, ಪುಣ್ಯಾಹ, ದೇವತಾನಾಂದಿ, ಅಂಕುರಾರ್ಪಣಾ ಪೂಜೆ, ದೇವಿಗೆ ಅಭಿಷೇಕ, ನವಗ್ರಹ ಪೂಜೆ, ಗಣಪತಿ ಹೋಮ ಹಾಗೂ ವಿಶ್ವಕರ್ಮ ಹೋಮ ನಡೆಯಲಿದೆ.

ಬೆಳಿಗ್ಗೆ ೧೦ ಗಂಟೆಯಿAದ ಸಾಮೂ ಹಿಕ ಉಪನಯನ, ಬ್ರಹ್ಮೋಪದೇಶ, ೧೧ ಗಂಟೆಯಿAದ ಲೋಕ ಕಲ್ಯಾಣಾ ರ್ಥವಾಗಿ ಮಹಿಳೆಯರಿಂದ ಸಾಮೂ ಹಿಕ ಕುಂಕುಮಾರ್ಚನೆ ಹಾಗೂ ೩-೫ ವರ್ಷದ ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ ನಂತರ ದೇವಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿ ಯೋಗವಿರುತ್ತದೆ. ಸಭಾ ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು ಶ್ರೀ ಕಾಳಿಕಾಂಬ ದೇವಾಲಯ ಸಮಿತಿ ಅಧ್ಯಕ್ಷ ಬಿ.ಬಿ. ನಾಗರಾಜ್ ತಿಳಿಸಿದ್ದಾರೆ.