ವೀರಾಜಪೇಟೆ, ಮೇ ೧೯: ಏಪ್ರಿಲ್ ೨೬ ರಂದು ಬ್ರಹ್ಮಲೀನರಾದ ಶ್ರೀ ವಿವೇಕಾನಂದ ಶರಣ ಸ್ವಾಮಿ ಅವರ ೧೬ನೇ ದಿನದ ಷೋಡಶಿ ಪೂಜೆ ವೀರಾಜಪೇಟೆ ಶ್ರೀ ಕಾವೇರಿ ಆಶ್ರಮದಲ್ಲಿ ಹಲವು ಸಾಧು ಸಂತರ ಹಾಗೂ ಭಕ್ತರ ಸಾನ್ನಿಧ್ಯದಲ್ಲಿ ನೆರವೇರಿತು.

ಪೂಜಾ ಕಾರ್ಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಚುಂಚನಗಿರಿಯ ಪುರುಷೋತ್ತಮಾನಂದನಾಥ ಸ್ವಾಮಿಗಳು, ಪೊನ್ನಂಪೇಟೆ ರಾಮಕೃಷ್ಣಾಶ್ರಮದ ಅಧ್ಯಕ್ಷ ಪರಹಿತಾನಂದ ಸ್ವಾಮೀಜಿ ಮತ್ತು ಸನ್ಯಾಸಿ ಶಿಷ್ಯರು, ಓಂಕಾರ ಆಶ್ರಮದ ಪೀಠಾಧಿಪತಿಗಳಾದ ಆಚಾರ್ಯ ಮಹಾಮಂಡಲೇಶ್ವರ ಡಾ. ಮಧುಸೂದನಾನಂದ ಪುರಿ ಸ್ವಾಮಿಗಳು ಮತ್ತು ಶಿಷ್ಯರುಗಳು, ಬೆಂಗಳೂರು ಶ್ರೀ ಕೈಲಾಸ ಆಶ್ರಮದ ಬುದ್ಧಾನಂದಪುರಿ ಸ್ವಾಮಿಗಳು ಮತ್ತು ಶಿಷ್ಯರು, ಊಟಿಯ ಕೈಲಾಸ ಆಶ್ರಮದ ಸುಗುಣಾನಂದ ಪುರಿ ಸ್ವಾಮಿಗಳು, ಬೆಂಗಳೂರು ವಿಶ್ವ ಒಕ್ಕಲಿಗರ ಮಠದ ರಮಣಾನಂದನಾಥ ಸ್ವಾಮಿಗಳು, ಬೆಂಗಳೂರು ರಾಮಕೃಷ್ಣ ಕುಟೀರ ಆಶ್ರಮದ ಶಾಂತಾನAದ ಸ್ವಾಮಿಗಳು, ಆಶ್ರಮ ವಾಸಿಗಳು, ಸದಸ್ಯರುಗಳು ಹಾಗೂ ಭಕ್ತಾದಿಗಳು ಭಾಗಿಯಾಗಿ ಶತಾಯುಷಿ ಬ್ರಹ್ಮಲೀನ ಗುರುಗಳ ಸ್ಮರಣೆ ಮಾಡಿದರು.