ಮಡಿಕೇರಿ, ಮೇ ೧೯: ರಾಷ್ಟಿçÃಯ ಮತ್ತು ಅಂರ‍್ರಾಷ್ಟಿçÃಯ ಚಲನಚಿತ್ರೋತ್ಸವಗಳಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಗಳಿಸಿ ಹೆಸರು ಮಾಡಿರುವ ಕೊಡಗಿನ ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರ ನಿರ್ದೇಶನದಲ್ಲಿ ಮತ್ತೊಂದು ಕನ್ನಡ ಚಿತ್ರ ತೆರೆಗೆ ಬರಲಿದೆ.

ಸ್ವಸ್ತಿಕ್ ಎಂಟರ್ಟೈನ್ಮೆAಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದ ಬಹು ನಿರೀಕ್ಷಿತ “ಕೌಮುದಿ” ಕನ್ನಡ ಚಲನಚಿತ್ರಕ್ಕೆ ಕನಕಪುರದ ಶ್ರೀ ಬಿಸಿಲು ಮಾರಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಹೂರ್ತ ನೆರವೇರಿಸಲಾಯಿತು.

ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾರಾಂಗಣದಲ್ಲಿ ಬಿಗ್‌ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ, ನೀನಾಸಂ ನಟರಾಜ್, ಶ್ರೀಧರ್, ಪಿ.ಬಿ. ರಾಜು ನಾಯಕ, ರೋಹಿಣಿ, ಕುಮಾರಿ ಅಂಕಿತಾ, ಕುಮಾರಿ ದೀಪಿಕಾ, ಬಂಗಾರಶೆಟ್ಟಿ ಮತ್ತಿತರರು ಇದ್ದಾರೆ.