ಕಣಿವೆ, ಮೇ ೨೧: ಕುಶಾಲನಗರದಲ್ಲಿ ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಸಾಯಿ ಬಡಾವಣೆಯ ರಾಜಕಾಲುವೆಯಲ್ಲಿ ಹರಿದ ವ್ಯಾಪಕ ನೀರಿನಿಂದಾಗಿ ರಾಜಕಾಲುವೆಯ ರಸ್ತೆ ಬದಿಯ ತಡೆಗೋಡೆ ಕುಸಿದ ಪರಿಣಾಮ ಅಳವಡಿಸಿದ್ದ ವಿದ್ಯುತ್ ಕಂಬವೂ ಕುಸಿದಿದೆ.

ಇನ್ನು ಎರಡು ದಿನ ರಾಜಕಾಲುವೆಯಲ್ಲಿ ಇದೇ ಮಾದರಿಯಲ್ಲಿ ಮಳೆಯ ನೀರು ಹರಿದರೆ ಸಾಯಿ ಬಡಾವಣೆ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳಿದ್ದಾರೆ. ಕೂಡಲೇ ಸ್ಥಳೀಯ ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.