ಕಣಿವೆ, ಮೇ ೨೦: ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮಳೆಯ ನೀರು ಮನೆಗಳ ಸುತ್ತ ಆವರಿಸಿ ಜಲಾ ವೃತಗೊಂಡ ಘಟನೆ ಕುಶಾಲನಗರದ ಮುಳ್ಳು ಸೋಗೆಯ ಚಂದ್ರಕಲಾ ರಸ್ತೆಯ ಆವರಣದಲ್ಲಿ ಸೋಮವಾರ ಸಂಜೆ ಕಂಡು ಬಂತು.

ಸ್ಥಳೀಯ ನಿವಾಸಿ ಮಡಿಕೇರಿ ಆಕಾಶ ವಾಣಿ ನೌಕರ ಮಂಜುನಾಥ್ ಎಂಬ ವರ ಮನೆಯ ಆವರಣ ಸಂಪೂರ್ಣ ನೀರಿನಿಂದ ಆವೃತವಾಗಿ ಮನೆ ಮಂದಿ ಹಾಗೂ ಅಕ್ಕಪಕ್ಕದ ನಿವಾಸಿಗಳು ತಿರುಗಾಡದ ಸ್ಥಿತಿ ನಿರ್ಮಾಣವಾಯಿತು.

ಕೂಡಲೇ ಸೂಕ್ತ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕೆAದು ಸ್ಥಳೀಯ ನಿವಾಸಿಗಳು ಒತ್ತಾಯಿಸಿ