ಕೂಡಿಗೆ, ಮೇ ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ, ಶಿರಹೂಳಲು ಗ್ರಾಮದ ವ್ಯಾಪ್ತಿಗೆ ಸೇರಿದ ಶ್ರೀ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಬಸವ ಜಯಂತಿ ಅಂಗವಾಗಿ ಬಸವ ಪೂಜ್ಯೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಪೂಜಾ ಕೈಂಕರ್ಯಗಳು ಮತ್ತು ಹೋಮ ಹವನಗಳನ್ನು ಅರ್ಚಕರಾದ ಸುಂಟಿಕೊಪ್ಪ ಮಂಜು ತಂಡದವರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಧರ್ಮ, ಕಾರ್ಯದರ್ಶಿ ಮಂಜುನಾಥ, ದೇವಾಲದ ಅರ್ಚಕ ಚಂದ್ರಮುರುಳಿ ಅರಾಧ್ಯ ಸೇರಿದಂತೆ ಸಮಿತಿ ಸದಸ್ಯರು, ಎರಡು ಗ್ರಾಮದ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.