ಸೋಮವಾರಪೇಟೆ, ಮೇ ೨೩: ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ತಿರುವು ರಸ್ತೆಯಲ್ಲಿದ್ದ ಟ್ರಾö್ಯಕ್ಟರ್‌ಗೆ ಡಿಕ್ಕಿಯಾಗಿ ಶಿಕ್ಷಕರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಸಂಜೆ ನಡೆದಿದೆ.

ಸೋಮವಾರಪೇಟೆ ತಾಲೂಕಿನ ಜಕ್ಕನಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ, ಪಟ್ಟಣದ ಅಶೋಕ ರಸ್ತೆಯಲ್ಲಿ ನೆಲೆಸಿದ್ದ ಎಚ್.ಸಿ. ಮನೋಹರ್ (೩೮) ಎಂಬವರೇ ಅಸುನೀಗಿದವರು. ಪಿರಿಯಾಪಟ್ಟಣದಲ್ಲಿದ್ದ ಪತ್ನಿ ಹಾಗೂ ಮಗುವನ್ನು ಕರೆತರಲೆಂದು ಇಂದು ಸಂಜೆ ಸೋಮವಾರಪೇಟೆಯಿಂದ ಪಿರಿಯಾಪಟ್ಟಣಕ್ಕೆ ತೆರಳುವ ಸಂದರ್ಭ ದುರ್ಘಟನೆ ಸಂಭವಿಸಿದೆ. ಪಿರಿಯಾಪಟ್ಟಣದ ಹಿಟ್ನಳ್ಳಿಯ ತಿರುವಿನಲ್ಲಿ ನಿಲ್ಲಿಸಿದ್ದ ಟ್ರಾö್ಯಕ್ಟರ್‌ಗೆ ಬೈಕ್ ಡಿಕ್ಕಿಯಾಗಿದ್ದು, ತೀವ್ರ ಸ್ವರೂಪದ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಮನೋಹರ್ ಅವರು ತಂದೆ, ತಾಯಿ, ಪತ್ನಿ ಮತ್ತು ಮೂರು ವರ್ಷದ ಪುತ್ರನನ್ನು ಅಗಲಿದ್ದಾರೆ.