-ಚಿತ್ರ ಸುದ್ದಿ: ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಮೇ ೨೩: ವಿವಿಧ ರೀತಿಯ ವೇಷ ತೊಟ್ಟ ಪುರುಷರು ತಮಟೆ, ಡ್ರಂ, ಬ್ಯಾಂಡ್ ಗಳೊಂದಿಗೆ ಸದ್ದು ಮಾಡುತ್ತಾ, ಕುಣಿಯುತ್ತ, ಸಾಗಿದ ನಾನಾ ವೇಷಧಾರಿಗಳು ನಗರದಲ್ಲಿ ಗುಂಪು ಗುಂಪಾಗಿ ಸಂಚರಿಸಿ ಎದುರು ಸಿಕ್ಕವರಿಗೆ ಬೈಗುಳದ ಸುರಿಮಳೆ ಯೊಂದಿಗೆ ದಕ್ಷಿಣ ಕೊಡಗಿನಲ್ಲಿ ಕಾಡು ಮಕ್ಕಳ ಬೇಡು ಹಬ್ಬದ ಸಂಭ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕೊಡಗಿನ ಬುಡಕಟ್ಟು ಜನರ ಪ್ರಮುಖ ಧಾರ್ಮಿಕ ಉತ್ಸವ, ಇತಿಹಾಸ ಪ್ರಸಿದ್ದಿ ಹೊಂದಿರುವ ಬೇಡು ಹಬ್ಬ ಅತ್ಯಂತ ವಿಜೃಂಭಣೆ ಯಿಂದ ನಡೆಯಿತು. ಆಶ್ಲೀಲ ಬೈಗುಳವೇ ಪ್ರಾರ್ಥನೆಯಾಗಿರುವ ಆದಿವಾಸಿಗಳ ವಿಭಿನ್ನ ಹಬ್ಬ ಎಂದು ಖ್ಯಾತಿ ಪಡೆದಿರುವ ಬೇಡು ಹಬ್ಬದಲ್ಲಿ (ಕುಂಡೆ ಹಬ್ಬ) ಸಾವಿರಾರು ಮಂದಿ ವಿವಿಧ ವೇಷ ಧರಿಸುವ ಮೂಲಕ ದಕ್ಷಿಣ ಕೊಡಗಿನ ದೇವರಪುರದ ಅಯ್ಯಪ್ಪ ದೇವಾಲಯದÀಲ್ಲಿ ನಡೆದ ಹಬ್ಬದ ಸಂಭ್ರಮಕ್ಕೆ ಕಾರಣರಾದರು.

ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಭಾಗದ ಬೂದಿತಿಟ್ಟು, ಮಾಲ್ದಾರೆ, ಪಂಚವಳ್ಳಿ, ಹನಗೋಡು, ಮಾಸ್ತಿಗುಡಿ, ವೀರನಹೊಸಳ್ಳಿ ನಾಗಾಪುರ ಸೇರಿದಂತೆ ವಿವಿಧ ಭಾಗಗಳಿಂದ ವೇಷ ಧರಿಸಿಕೊಂಡು ಬಂದಿದ್ದ ಸಾವಿರಾರು ಆದಿವಾಸಿಗಳು ಕೈಗೆ ಸಿಕ್ಕಿದ ವಸ್ತುಗಳನ್ನೇ ತಾಳಮೇಳ ಮಾಡಿಕೊಂಡು ವೇಷ ಧರಿಸಿ ಕುಣಿದು ಕುಪ್ಪಳಿಸಿದರು.

ಆಶ್ಲೀಲ ಬೈಗುಳ, ಸೂರೆ ಬುರುಡೆಯ ಶಬ್ದ ಗೋಣಿಕೊಪ್ಪ ಪಟ್ಟಣ ಸೇರಿದಂತೆ ತಿತಿಮತಿ, ಪೊನ್ನಂಪೇಟೆ, ಪಾಲಿಬೆಟ್ಟ, ಬಾಳೆಲೆ, ಮಾಯಮುಡಿ, ವೀರಾಜಪೇಟೆ, ಸಿದ್ದಾಪುರ, ಕುಶಾಲನಗರ ಭಾಗಗಳಲ್ಲಿಯೂ ಕಾಡು ಮಕ್ಕಳ ನೃತ್ಯ ಬೈಗುಳದೊಂದಿಗೆ ಸಂಭ್ರಮವಾಗಿತ್ತು.

ಯುವಕರು ಕೈಗೆ ಸಿಕ್ಕಿದ ಹಳೆಯ ಟಿಣ್ಣು, ಪ್ಲಾಸ್ಟಿಕ್ ಡ್ರಮ್, ಒಡೆದ ಪ್ಲಾಸ್ಟಿಕ್ ಬಿಂದಿಗೆ, ಬಕೆಟ್‌ಗಳನ್ನು ವಾದ್ಯ ಪರಿಕರಗಳಾಗಿ ಪರಿವರ್ತಿಸಿ ಅದನ್ನು ಬಡಿಯುತ್ತ ಹೆಜ್ಜೆ

ಹಾಕುತ್ತ ಪಾದಚಾರಿಗಳ ಬಳಿ, ಅಂಗಡಿ, ಮನೆಗಳಿಗೆ ತೆರಳಿ ಹಣ, ದವಸ, ಧಾನ್ಯಗಳನ್ನು ಬೇಡಿ ಸಂತುಷ್ಟರಾದರು.

(ಮೊದಲ ಪುಟದಿಂದ) ಅರಣ್ಯದಂಚಿನಲ್ಲಿರುವ ಆದಿವಾಸಿಗಳು ವೇಷ ಭೂಷಣವನ್ನು ಕಾಡಿನಲ್ಲಿ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ವಿಭಿನ್ನವಾಗಿ ಶೃಂಗರಿಸಿಕೊAಡು ಸಂಭ್ರಮಿಸುತ್ತಾರೆ. ಆದರೆ, ಇಂದು ತಾಂತ್ರಿಕವಾಗಿ ಮುಂದುವರೆದಿರುವ ಕಾರಣ ಕಾಲಕ್ಕೆ ತಕ್ಕಂತೆ ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದ ವ್ಯಕ್ತಿಗಳಾಗಿ ವೇಷಭೂಷಣ ಮಾಡಿಕೊಂಡು ಜನರಿಂದ ಬೇಗ ಅಕರ್ಷಿತರಾಗುತ್ತಿದ್ದುದು ಕಂಡುಬAತು.

ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯಿAದ ಹಿಡಿದು ಜಿಲ್ಲೆಯ ತಿತಿಮತಿ ದೇವರಪುರದವರೆಗೂ ರಾಜ್ಯ ಹೆದ್ದಾರಿಯಲ್ಲಿ ಹಬ್ಬದ ವೇಷಧಾರಿಗಳೇ ಕಂಡುಬAದರು. ಹಲವೆಡೆ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ ಕುಣಿಯುತ್ತ ಹಣ ಬೇಡಿದರು. ಅವರು ಹಣಕೊಟ್ಟರೂ ಬೈಯುತ್ತಿದ್ದರು, ಕೊಡದಿದ್ದರೂ ಬೈಯುತ್ತಿದ್ದರು. ವೇಷಧಾರಿಗಳು ಎಷ್ಟೇ ಬೈದರೂ ಯಾರೂ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಇದಕ್ಕೆ ಬೈಗುಳದ ಹಬ್ಬವೆಂದೇ ಪ್ರತೀತಿ ಪಡೆದುಕೊಂಡಿದೆ.

ಹರಕೆ ಪೂರೈಸಿದ ವೇಷಧಾರಿಗಳು

ದೇವರಪುರದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಅಂಗಳದಲ್ಲಿ ವೇಷಧಾರಿಗಳು ಸೊಪ್ಪು, ಹರಿದ ಬಟ್ಟೆ, ಸ್ತಿçà ರೂಪಧಾರಿಗಳು, ದೇವರ ಅವತಾರ, ತುಂಡುಡುಗೆ, ವಿಭಿನ್ನ ಶೈಲಿಯಲ್ಲಿ ಡೋಲು ಬಾರಿಸುವುದರೊಂದಿಗೆ ನೃತ್ಯ ಮಾಡಿ ಹರಕೆ ಪೂರೈಸಿದರು. ಹರಕೆಯ ರೂಪದಲ್ಲಿ ಕೋಳಿಗಳನ್ನು ಹಾರಿಬಿಟ್ಟು ತಮ್ಮ ಹರಕೆ ತೀರಿಸಿದರು. ಜೀವಂತ ಕೋಳಿಗಳನ್ನು ನೆರೆದಿದ್ದ ಭಕ್ತರು ಮುಗಿಬಿದ್ದು ಪಡೆದುಕೊಂಡರು.

ಮಧ್ಯಾಹ್ನ ೩ ಗಂಟೆ ವೇಳೆಗೆ ಭದ್ರಕಾಳಿ ದೇವಸ್ಥಾನದ ಭಂಡಾರ ತಕ್ಕರಾದ ಸಣ್ಣುವಂಡ ಕುಟುಂಬಸ್ಥರು ಧಾರ್ಮಿಕ ಕಾರ್ಯಕ್ಕೆ ಮುನ್ನುಡಿ ಇಟ್ಟರು, ಮನೆಯಪಂಡ ಅಯ್ಯಪ್ಪ ಹಾಗೂ ಚೆಕ್ಕೆರ ಅಯ್ಯಪ್ಪ ಕೃತಕ ಕುದುರೆ ತೆಗೆದು ದೇವಸ್ಥಾನದ ಬಳಿ ಬಂದು ಪೂಜೆ ಪುನಸ್ಕಾರ ನೆರವೇರಿಸಿದರು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವೇಷಧಾರಿಗಳು ಸರತಿ ಸಾಲಿನಲ್ಲಿ ಸಾಗುತ್ತ, ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಅಪೂರ್ವ ಕ್ಷಣವನ್ನು ಸವಿಯಲು ದೂರದ ಊರಿನಿಂದ ಸಾವಿರಾರು ಜನರು ದೇವಾಲಯದ ಬಳಿ ಮಧ್ಯಾಹ್ನದಿಂದಲೇ ಬಂದು ನೆರೆದಿದ್ದರು.

ಇದಕ್ಕೂ ಮೊದಲು ಅಲ್ಲಿನ ಅಂಬಲದಿAದ ಭದ್ರಕಾಳಿ ದೇವರು ವ್ಯಕ್ತಿಯ ಮೈ ಮೇಲೆ ಬಂದು ಹಬ್ಬದಲ್ಲಿ ಪಾಲ್ಗೊಂಡಿತು. ಇದರೊಂದಿಗೆ ಪಣಿಕ ಜನಾಂಗದ ಇಬ್ಬರು ದೇವರ ಮೊಗವನ್ನು ತೆಗದುಕೊಂಡು ಕುದುರೆಯೊಂದಿಗೆ ಅಯ್ಯಪ್ಪ ದೇವಸ್ಥಾನದತ್ತ ತೆರಳಿದರು.

ವನವಾಸಿ ಕಲ್ಯಾಣ ಸಮಿತಿ ವತಿಯಿಂದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮ ವ್ಯಾಪ್ತಿಯ ಕೊಡವ ಕುಟುಂಬಗಳು ಆಚರಣೆಗೆ ಪೂರಕ ಸಹಕಾರ ನೀಡಿದವು. ಸಂಜೆಯಾದ ಬಳಿಕ ಗಿರಿಜನರು ತಾವು ಎರಡು ದಿನಗಳ ಕಾಲ ಬೇಡಿದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಭದ್ರಕಾಳಿ ದೇವಸ್ಥಾನದ ಹುಂಡಿಗೆ ಹಾಕಿ ಬೈದ್ದು ತಪ್ಪಾಯ್ತು ಕ್ಷಮಿಸು ಎಂದು ದೇವರ ಬಳಿ ಕ್ಷಮೆ ಕೋರಿದರು.

ಮುಂಜಾಗ್ರತಾ ಕ್ರಮವಾಗಿ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮುಂದಾಳತ್ವದಲ್ಲಿ ಶಶಸ್ತç ಪಡೆಯ ೨ ಪೊಲೀಸ್ ತುಕಡಿಗಳು, ಅಧಿಕಾರಿಗಳು ಸೇರಿದಂತೆ ೧೫೦ಕ್ಕೂ ಅಧಿಕ ಮಂದಿ ಪೊಲೀಸರನ್ನು ಭದ್ರತೆಯ ಹಿನ್ನೆಲೆಯಲ್ಲಿ ನಿಯೋಜನೆ ಮಾಡಲಾಗಿತ್ತು. ಮಧ್ಯಾಹ್ನದಿಂದಲೇ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಹಲವು ಸಂಘ-ಸAಸ್ಥೆಗಳು ಅನ್ನದಾನ ಮಾಡಿದವು.