ವೀರಾಜಪೇಟೆ, ಮೇ ೨೨: ಪಟ್ಟಣದಲ್ಲಿ ನಡೆದ ಬಂಟರ ಸಂಗಮ-೨೦೨೪ ಜಿಲ್ಲಾ ಮಟ್ಟದ ಬಂಟರ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ಕೈಕೇರಿಯ ಯಂಗ್ ಬಂಟ್ಸ್ ಪ್ಯಾಂಥರ್ಸ್ ತಂಡ ಪ್ರಶಸ್ತಿ ಪಡೆದುಕೊಂಡಿತು.

ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಯಂಗ್ ಬಂಟ್ ಪ್ಯಾಂಥರ್ಸ್ ತಂಡ ೧೯ ರನ್‌ಗಳಿಂದ ಮಡಿಕೇರಿಯ ಚಕ್ರವರ್ತಿ ತಂಡವನ್ನು ಮಣಿಸಿತು. ಕ್ರಿಕೆಟ್ ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ದಿಕ್ಷೀತ್, ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಶರತ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಜಯಂತ್ ರೈ ಹಾಗೂ ಫೈನಲ್‌ನ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗಗನ್ ಆಳ್ವ ಪಡೆದುಕೊಂಡರು.

ಥ್ರೋಬಾಲ್‌ನಲ್ಲಿ ಮಡಿಕೇರಿಯ ಮಹಿಳಾ ಘಟಕದ ತಂಡವು ಪ್ರಶಸ್ತಿಯನ್ನು ಪಡೆದುಕೊಂಡರೆ, ನೀಲಿಮಾಡು ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮಡಿಕೇರಿಯ ಚಕ್ರವರ್ತಿ ತಂಡವು ಪ್ರಶಸ್ತಿ ಪಡೆದುಕೊಂಡರೆ, ವೀರಾಜಪೇಟೆಯ ಮಲ್ನಾಡು ಬಂಟ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ನಾಪೋಕ್ಲು ತಂಡ ಪ್ರಶಸ್ತಿಯನ್ನು ಪಡೆದುಕೊಂಡರೆ, ಮಡಿಕೇರಿಯ ಮಹಿಳಾ ಘಟಕದ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿತು.

ಭಾರದ ಗುಂಡು ಎಸೆತ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರಮೇಶ್ ರೈ ಪ್ರಥಮ, ಗಗನ್ ಆಳ್ವಾ ದ್ವಿತೀಯ ಹಾಗೂ ರಂಜಿತ್ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ಮಹಿಳೆಯ ವಿಭಾಗದಲ್ಲಿ ಶುಭ ಶೆಟ್ಟಿ ಪ್ರಥಮ, ರಾಶಿ ದ್ವಿತೀಯ ಹಾಗೂ ಭೂಮಿಕ ತೃತೀಯ ಸ್ಥಾನ ಪಡೆದುಕೊಂಡರು.

ಮಕ್ಕಳಿಗೆ ನಡೆದ ಬಾಂಬ್ ಬ್ಲಾಸ್ಟಿಂಗ್ ಸ್ಪರ್ಧೆಯಲ್ಲಿ ತಾನ್ಯ ರೈ ಪ್ರಥಮ, ಆತ್ಮಿಕ ರೈ ದ್ವಿತೀಯ ಹಾಗೂ ಸುಜಾತ ರೈ

(ಮೊದಲ ಪುಟದಿಂದ) ತೃತೀಯ ಸ್ಥಾನ ಪಡೆದುಕೊಂಡರು. ಕಪ್ಪೆ ಜಿಗಿತದಲ್ಲಿ ವಿಹಾನ್ ರೈ ಪ್ರಥಮ, ಸಾರಾ ಶೆಟ್ಟಿ ದ್ವಿತೀಯ ಹಾಗೂ ಮಿರಲ್ ಆಳ್ವಾ ತೃತೀಯ ಸ್ಥಾನ ಪಡೆದುಕೊಂಡರು. ನರ್ಸರಿ ವಿಭಾಗದ ಪುಟಾಣಿಗಳಿಗೆ ನಡೆದ ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ಆರ್ವ್ ರೈ ಪ್ರಥಮ, ನೈನ ರೈ ದ್ವಿತೀಯ, ಜಶ್ವಿಕ್ ರೈ ತೃತೀಯ ಹಾಗೂ ದ್ರುವ ರೈ ಚತುರ್ಥ ಸ್ಥಾನ ಪಡೆದರು. ಬಾಲಕಿಯರ ಓಟದ ಸ್ಪರ್ಧೆ ಯಲ್ಲಿ ಜನನಿ ರೈ ಪ್ರಥಮ, ನಿರ್ವಿ ದ್ವಿತೀಯ ಹಾಗೂ ಇಂಚರ ರೈ ತೃತೀಯ ಬಹುಮಾನ ಪಡೆದುಕೊಂಡರು. ಬಾಲ ಕರ ವಿಭಾಗದಲ್ಲಿ ದರ್ಶಿಲ್ ಪ್ರಥಮ, ಶಶಿತ್ ರೈ ದ್ವಿತೀಯ ಹಾಗೂ ಸಂಚಿತ್ ತೃತೀಯ ಸ್ಥಾನ ಪಡೆದುಕೊಂಡರು.

ಸಮಾರೋಪ ಸಮಾರಂಭ: ಬಂಟರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ, ಪ್ರಧಾನ ಕಾರ್ಯದರ್ಶಿ ವಿ. ರವೀಂದ್ರ ರೈ, ಸೋಮವಾರಪೇಟೆ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಬಿ. ಜನಾರ್ಧನ ಶೆಟ್ಟಿ, ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ್ ರೈ, ಮಡಿಕೇರಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಶೆಟ್ಟಿ ಹಾಗೂ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವೀರಾಜಪೇಟೆ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಎಸ್. ಲೀಲಾಧರ ರೈ ಅವರು ಸಮಾರೋಪ ಸಮಾರಂಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಮಾರಂಭದಲ್ಲಿ ನ್ಯಾಯಾಧೀಶೆ ಲತಾ, ಯೋಗಗುರು ಸೀತಾರಾಂ ರೈ, ಜಾದೂಗಾರ್ ವಿಕ್ರಂ ಶೆಟ್ಟಿ, ಪೊಲೀಸ್ ಕ್ರೀಡಾಪಟು ಜಿತೇಂದ್ರ ರೈ ಅವರನ್ನು ಸನ್ಮಾನಿಸಲಾಯಿತು.

ವೀರಾಜಪೇಟೆ ತಾಲೂಕು ಬಂಟರ ಸಂಘದ ಗೌರವ ಅಧ್ಯಕ್ಷ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ರೈ, ಕಾರ್ಯದರ್ಶಿ ಸಂಪತ್ ಶೆಟ್ಟಿ, ಮಹಿಳಾ ಘಟಕದ ಗೌರವ ಅಧ್ಯಕ್ಷೆ ಕುಸುಮ ಎನ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಆರ್. ನೀತಾ ರೈ, ನಿರ್ದೇಶಕ ಬಿ.ಕೆ. ಸತೀಶ್ ರೈ, ಡಾ.ಹೇಮಂತ್ ಶೆಟ್ಟಿ, ಕೆ.ಡಿ. ಸತೀಶ್ ರೈ, ನಿರ್ದೇಶಕಿ ಶೋಭಾ ರೈ, ಬಿ.ಎ. ಸುರೇಶ್ ರೈ, ಶೀತಲ್ ರೈ, ಖಜಾಂಚಿ ಮದನ್ ಶೆಟ್ಟಿ, ಸುದೀಶ್ ರೈ, ಸತೀಶ್ ರೈ, ಕಾರ್ಯದರ್ಶಿ ಶಶಿಕಲಾ ಶೆಟ್ಟಿ ಮತ್ತಿತರರಿದ್ದರು.

ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧೆಡೆ ಗಳಲ್ಲಿ ನೆಲೆಸಿರುವ ಸಮುದಾಯದ ತಂಡಗಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.