ಶನಿವಾರಸಂತೆ, ಮೇ ೨೩: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದಲ್ಲಿ ಭೀಮ ಆರ್ಮಿ ಯುವಕ ಸಂಘ ಹಾಗೂ ಮಾನವ ಬಂಧುತ್ವ ವೇದಿಕೆ ಸಹಭಾಗಿತ್ವದಲ್ಲಿ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಯಿತು.

ಬುದ್ಧನ ಪ್ರತಿಮೆಗೆ ಪುಷ್ಪ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು. ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಜೆ.ಎಲ್. ಜನಾರ್ಧನ್ ಮಾತನಾಡಿ, ಬುದ್ಧನ ಜನನ-ಜ್ಞಾನೋದಯ-ನಿಧನ ಸಂಗಮದ ದಿನವನ್ನು ಬುದ್ಧ ಪೂರ್ಣಿಮೆಯಾಗಿ ಆಚರಿಸಲಾಗುತ್ತಿದೆ. ಬುದ್ಧನ ವಿಚಾರಧಾರೆ ಆದರ್ಶ ಮಾತ್ರವಾಗಿರದೆ ಅನುಕರಣೀಯವಾಗಿದೆ. ಬುದ್ಧ ಹಾಗೂ ಬುದ್ಧನ ವಿಚಾರಧಾರೆ ವಿಶ್ವ ಮಾನ್ಯತೆ ಪಡೆದಿದೆ ಎಂದರು.

ಪ್ರಮುಖರಾದ ಡಿ.ಆರ್. ಲಿಂಗರಾಜ್, ಜವರೇಗೌಡ, ಪ್ರಶಾಂತ್, ಯೋಗಾನಂದ್, ನಂದೀಶ್, ದೊಡ್ಡಯ್ಯ, ರಂಗಸ್ವಾಮಿ, ರಮೇಶ್, ಕೀರ್ತಿ, ನಾಗೇಶ್, ಮೋಹನ್, ನಾಗಣ್ಣ, ಹೊನ್ನಪ್ಪ, ಲಿಂಗರಾಜ್, ದಿವಾಕರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.