ಮಡಿಕೇರಿ, ಮೇ ೨೩: ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯದಲ್ಲಿ ಜಿಲ್ಲಾಮಟ್ಟದ ಮುಕ್ತ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಿತು.

ವಿವಿಧ ವಿಭಾಗಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು ೧೨೦ಕ್ಕೂ ಹೆಚ್ಚಿನ ಆಟಗಾರರು ಭಾಗವಹಿಸಿದ್ದರು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯ ಮಹಾ ವಿದ್ಯಾನಿಲಯದ ಡೀನ್ ಡಾ. ಜಿ.ಎಂ. ದೇವಗಿರಿ, ಪಂದ್ಯಾವಳಿಯಲ್ಲಿ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿ ಉನ್ನತ ಸ್ಥಾನಕ್ಕೆ ಏರಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ಭಾರತ ಹಾಕಿ ಕ್ರೀಡಾಪಟು ಕೆ.ಟಿ. ಮೋಹನ್ ಉಪಸ್ಥಿತರಿದ್ದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗ್ಡೆ, ಡಾ. ಮಹೇಶರಪ್ಪ, ಗ್ರಂಥಪಾಲಕರಾದ ಸುಬ್ರಮಣಿ, ಮಹೇಶ್ ಹೊಳ್ಳ, ಕೊಡಗು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿ ಯೇಷನ್‌ನ ಗೌರವಾಧ್ಯಕ್ಷ ವಿ.ಎಸ್. ಮೊಹಮ್ಮದ್ ಆಸೀಫ್ ಮತ್ತು ಪಿ.ಎಲ್. ಮಂಜುನಾಥ್, ಕೆ.ಎನ್. ಪ್ರವೀಣ್ ಶೇಟ್, ಅರಣ್ಯ ಮಹಾ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಎ. ಈಶ್ವರ್ ಹಾಜರಿದ್ದರು.

ವಿಜೇತರ ವಿವರ: ಯು-೧೦ ಬಾಲಕರ ವಿಭಾಗದಲ್ಲಿ ಚಿರಂಜೀವಿ ಪ್ರಥಮ, ದರ್ಶನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಕೆ. ಲಿಪಿಕಾ ಪ್ರಥಮ, ಲಾವಣ್ಯ ದ್ವಿತೀಯ, ಯು-೧೫ ಬಾಲಕರ ವಿಭಾಗದಲ್ಲಿ ಕೆ. ಲಿತಶ್ ಪ್ರಥಮ, ಅವನೀಶ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸಿಂಚನಾ ಪ್ರಥಮ, ಲೋಚನಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.ಯು-೧೮ ಯುವಕರ ವಿಭಾಗದಲ್ಲಿ ಸಹದೆ ಶಬೀರ್ ಪ್ರಥಮ, ಕೆ. ಲೀತೇಶ್ ದ್ವಿತೀಯ, ಯು-೨೫ ಯುವಕರ ವಿಭಾಗದಲ್ಲಿ ಕೆ. ಲೀತೆಶ್ ಪ್ರಥಮ, ಅದೀಬ್ ವಸೀಂ ದ್ವಿತೀಯ, ವಿದ್ಯಾರ್ಥಿನಿಯರ ವಿಭಾಗದಲ್ಲಿ ರಕ್ಷಿತಾ ಪ್ರಥಮ, ಸಿಂಚನಾ ದ್ವಿತೀಯ, ಮುಕ್ತ ವಿಭಾಗದಲ್ಲಿ ರಚನ್ ಪೊನ್ನಪ್ಪ ಪ್ರಥಮ, ಕೆ.ಎ. ಈಶ್ವರ್ ದ್ವಿತೀಯ, ಮುಕ್ತ ಡಬಲ್ಸ್ ಪುರುಷರ ವಿಭಾಗದಲ್ಲಿ ರಚನ್ ಪೊನ್ನಪ್ಪ ಮತ್ತು ಡೆರಿಕ್ ಪ್ರಥಮ, ಮಂಜುನಾಥ್ ಮತ್ತು ವರುಣ್ ಸುಧಾಕರ ದ್ವಿತೀಯ, ಮಿಕ್ಸ್ಡ್ ಡಬಲ್ಸ್ನಲ್ಲಿ ಈಶ್ವರ ಮತ್ತು ರಕ್ಷಿತಾ ಪ್ರಥಮ, ರಚನ್ ಪೊನ್ನಪ್ಪ ಮತ್ತು ನಮಿತಾ ದ್ವಿತೀಯ, ಮಹಿಳೆಯರ ಮುಕ್ತ ಡಬಲ್ಸ್ನಲ್ಲಿ ತಂಗಮ್ಮ ಮತ್ತು ರೀತ್ ಗಣಪತಿ ಪ್ರಥಮ, ನಮಿತಾ ಮತ್ತು ಮನಾಸಾ ದ್ವಿತೀಯ, ೫೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರವೀಣ್ ಶೇಟ್ ಪ್ರಥಮ, ಮಹಮ್ಮದ್ ಅನಿಫ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.