ಚೆಟ್ಟಳ್ಳಿ, ಮೇ ೨೩: ಚೆಟ್ಟಳ್ಳಿ ಸಮೀಪದ ಪೊನ್ನತ್‌ಮೊಟ್ಟೆಯ ಅನಾಥ ಬಡ ಹೆಣ್ಣುಮಗಳ ವಿವಾಹ ಸಹಾಯ ಹಸ್ತಾಂತರ ಹಾಗೂ ಮಾಸಿಕ ಮಹಳರತುಲ್ ಬದ್ರಿಯ ಸಮಾರಂಭವು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್. ಸಂಘಟನೆಗಳ ಸಹಯೋಗದೊಂದಿಗೆ ಮುಸ್ಲಿಂ ಜಮಾಅತ್ ಪೊನ್ನತ್‌ಮೊಟ್ಟೆ ಶಾಖಾ ಅಧ್ಯಕ್ಷ ಎಸ್.ಎಂ. ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಯುತು.

ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದ ಕೂರ್ಗ್ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಇಸ್ಲಾಂ ಸರಳ ವಿವಾಹವನ್ನು ಪ್ರೋತ್ಸಾಹಿಸುತ್ತದೆ. ವರದಕ್ಷಿಣೆ ಎನ್ನುವುದು ಇಸ್ಲಾಂಮಿನ ಆಚಾರವಲ್ಲ ವಧುದಕ್ಷಿಣೆ ಅಥವಾ ಮಹರ್ ನೀಡಿ ಮದುವೆಯಾಗುವು ದಾಗಿದೆ ಇಸ್ಲಾಂಮಿನ ಪದ್ಧತಿ. ಆದರೆ ಶ್ರೀಮಂತ ಹೆಣ್ಣು ಮಕ್ಕಳು ಹೆಚ್ಚು ಆಭರಣಗಳನ್ನು ಹೊಂದಿ ಮದುವೆ ಯಾಗುವಾಗ ಬಡ ಹೆಣ್ಣು ಮಕ್ಕಳಿಗೆ ಅಲ್ಪ ಪ್ರಮಾಣದ ಆಭರಣಗಳನ್ನಾದರೂ ನೀಡುವುದರೊಂದಿಗೆ ಅವರ ಕಣ್ಣೀರು ಒರೆಸುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಮಾತನಾಡಿ, ಆಧುನಿಕ ವಿವಾಹಗಳಲ್ಲಿ ಕೆಲವೊಂದು ಬಹಳ ದುಂದುವೆಚ್ಚಗಳಿAದ ಕೂಡಿರುವುದು ಕಂಡುಬರುತ್ತಿದೆ. ಪ್ರವಾದಿ ವರ್ಯರ ಕಾಲದಲ್ಲಿ ಕೆಲವೊಂದು ವಿವಾಹಗಳು ನಡೆದ ನಂತರ ಸಮೂಹಕ್ಕೆ ತಿಳಿಯುತಿತ್ತು ಅಷ್ಟೊಂದು ಸರಳವಾಗಿತ್ತು. ಮುಸ್ಲಿಂ ಜಮಾಅತ್, ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್. ಸಂಘಟನೆಗಳು ಮಾಡುತ್ತಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಪ್ರಸಂಸೆ ವ್ಯಕ್ತಪಡಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಕಾರ್ಯದರ್ಶಿ ಅಹಮ್ಮದ್ ಹಾಜಿ, ಮುಸ್ತಫ ಸಖಾಫಿ, ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್ ಕೊಳಕೇರಿ, ಪ್ರಮುಖ ರಾದ ಅಬ್ದುಲ್ಲ ಸಖಾಫಿ ಮೊದಲಾದವರು ಕಾರ್ಯಕ್ರಮಕ್ಕೆ ಶುಭಕೋರಿದರು. ವೇದಿಕೆಯಲ್ಲಿ ಸ್ಥಳೀಯ ಖತೀಬ್ ಸಾದುಲಿ ಸಖಾಫಿ, ಎಸ್.ವೈ.ಎಸ್. ಜಲ್ಲಾ ಕಾರ್ಯದರ್ಶಿ ಅಹ್ಮದ್ ಮದನಿ, ಎಸ್.ಎಸ್.ಎಫ್. ಜಿಲ್ಲಾ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಎಸ್.ವೈ.ಎಸ್. ಜಿಲ್ಲಾ ಕೋಶಾಧಿಕಾರಿ ಅಬ್ದುಲ್ಲ, ಅಬ್ದುಲ್ಲ ಸಖಾಫಿ, ಹಂಸ ನೆಲ್ಲಿಹುದಿಕೇರಿ, ಯಾಕೂಬ್ ಮಾಸ್ಟರ್, ಹಂಸಮಾಣಿ ಜಮಾಅತ್ ಅಧ್ಯಕ್ಷ ಉಬೈದುಲ್ಲಾ ಮೌಲವಿ, ಉದ್ಯಮಿ ಖಾಸೀಮ್ ಕುಶಾಲನಗರ ಮೊದಲಾದ ಪ್ರಮುಖರು ವೇದಿಯಲ್ಲಿದ್ದರು. ಮುಸ್ಲಿಂ ಜಮಾಅತ್ ಸೋಮವಾರಪೇಟೆ ವಲಯ ಅಧ್ಯಕ್ಷ ವಿ.ಪಿ. ಮೌಯ್ದೀನ್ ಪೊನ್ನತ್‌ಮೊಟ್ಟೆ ಸ್ವಾಗತಿಸಿ, ಸಲಾಂ ಮದನಿ ವಂದಿಸಿದರು.