ಸಿದ್ದಾಪುರ, ಮೇ ೨೩: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಈ ಹಿಂದೆ ಬಿಸಿಲಿನ ತಾಪದಿಂದ ನದಿಯಲ್ಲಿ ಕಲ್ಲುಗಳು ಎದ್ದು ಕಾಣುತ್ತಿತ್ತು. ಇದೀಗ ದಿನನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಪ್ರಮಾಣ ಏರಿಕೆಯಾಗಿ ಜೀವಕಳೆ ಬಂದಿದೆ.