ಭಾಗಮಂಡಲ, ಮೇ ೨೫: ಸಿಮೆಂಟ್ ಇಟ್ಟಿಗೆ ವ್ಯಾಪಾರಿಯೊಬ್ಬರ ಬ್ಯಾಂಕ್ ಖಾತೆಯ ಕ್ರೆಡಿಟ್ ಕಾರ್ಡ್ನಲ್ಲಿದ್ದ ೯೯,೮೪೩.೫೦ ರೂ. ಹಣವನ್ನು ದುಷ್ಕರ್ಮಿಗಳು ಲಪಟಾಯಿಸಿರುವ ಘಟನೆ ನಡೆದಿದೆ.

ಅಯ್ಯಂಗೇರಿಯ ಕೆ.ಎ. ಆಲಿ ಎಂಬವರೆ ಹಣ ಕಳೆದುಕೊಂಡವರಾಗಿದ್ದಾರೆ. ತಾ. ೧೯ರಂದು ಬೆಳಿಗ್ಗೆ ೯.೪೮ ಗಂಟೆ ಹಾಗೂ ೯.೫೦ ಗಂಟೆಗೆ ಎರಡು ಬಾರಿ ಆಲಿ ಅವರಿಗೆ ಸೇರಿದ ಬಲ್ಲಮಾವಟಿಯ ಕೆನರಾ ಬ್ಯಾಂಕ್ ಖಾತೆಯ ಕ್ರೆಡಿಟ್ ಕಾರ್ಡ್ನಲ್ಲಿದ್ದ ಹಣವನ್ನು ದೋಚಲಾಗಿದೆ. ಮೊದಲ ಬಾರಿಗೆ ರೂ.೪೮,೩೬೮.೫೦ ಹಾಗೂ ಎರಡನೇ ಬಾರಿಗೆ ರೂ.೫೧,೪೭೫ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹಣವನ್ನು ಆಗಂತುಕರು ಲಪಟಾಯಿಸಿದ್ದಾರೆ. ಹಣ ಡ್ರಾ ಆದ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದ ವೇಳೆ ಅದನ್ನು ಪರಿಶೀಲಿಸಿದಾಗ ನಾಲ್ಕೆöÊದು ಒಟಿಪಿಗಳು ಬಂದಿರುವುದು ಕಂಡು ಬಂದಿದೆ. ಹಣವು ಒನ್ ಮೋಬಿಕ್ ಸಿಸ್ಟಮ್ ಪ್ರೆöÊ ಮೂಲಕ ವರ್ಗಾವಣೆಯಾಗಿದೆ. ಈ ಬಗ್ಗೆ ಆಲಿ ಅವರು ಭಾಗಮಂಡಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.