ಮಡಿಕೇರಿ, ಮೇ ೨೬: ಕೊಡಗು ಧಮ್ಮ ವಿಜಯ ಸಂಘಟನೆ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕ್ಕ ಐ.ಎ.ಎಸ್. ಅಕಾಡೆಮಿ ಸಂಸ್ಥಾಪಕ ಡಾ. ಶಿವಕುಮಾರ್, ನಮ್ಮ ಎಲ್ಲ್ಲಾ ಸುಖ ಹಾಗೂ ದುಃಖಗಳಿಗೆ ಕಾರಣವಾದ ನಮ್ಮ ಮನಸ್ಸನ್ನು ಯಾವ ರೀತಿಯಲ್ಲಿ ತರಬೇತಿಗೊಳಿಸಬೇಕು ಎಂದು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಶೋಕಪುರ ಅನ್ನಪೂರ್ಣ ಸಮಿತಿಯ ಅಧ್ಯಕ್ಷ ಜಯರಾಂ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ನಗರಸಭಾ ಸದಸ್ಯೆ ಶಾರದಾ ನಾಗರಾಜು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ ನೌಕರರ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ವೈದ್ಯರಾದ ಡಾ. ಪ್ರಕಾಶ್, ಡಾ. ಆನಂದ್, ಧಮ್ಮ ವಿಜಯ ಸಂಘಟನೆಯ ಹಿರಿಯ ಸದಸ್ಯ ಶ್ಯಾಮ್, ನಗರ ಸಭೆಯ ಮಾಜಿ ಸದಸ್ಯೆ ಚಿತ್ರ ದೇವರಾಜು ಮೆಣದ ಬತ್ತಿಹಚ್ಚಿ ಬುದ್ಧ ಪ್ರತಿಮೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಸಂಘಟನೆಯ ಸದಸ್ಯ ಮೋಹನ್ ಮೌರ್ಯ ಸ್ವಾಗತಿಸಿದರು. ದೀಪಕ್ ಪೊನ್ನಪ್ಪ ವಂದಿಸಿದರು.