ಮಡಿಕೇರಿ, ಮೇ ೨೬: ನಗರದ ದೇಚೂರಿನ ಶ್ರೀರಾಮ ವಿದ್ಯಾಗಣಪತಿ ದೇವಾಲಯದಲ್ಲಿ ತಾ. ೨೭ ರಂದು (ಇಂದು) ೨೭ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಹೆಚ್.ಆರ್. ಉದಯ್ ಕುಮಾರ್ ತಂತ್ರಿ ನೇತೃತ್ವದಲ್ಲಿ ಬೆಳಿಗ್ಗೆ ೮.೩೦ಕ್ಕೆ ನಿರ್ಮಾಲ್ಯ, ಪುಣ್ಯಾಹ ವಾಚನ, ೯ಕ್ಕೆ ದೇವತಾ ಪ್ರಾರ್ಥನೆ, ೯.೩೦ಕ್ಕೆ ಮಹಾಗಣಪತಿ ಮೂರ್ತಿಗೆ ಅಭಿಷೇಕ, ೧೦ಕ್ಕೆ ಬಯಲು ಆಂಜನೇಯ ಪೂಜೆ, ೧೦.೩೦ಕ್ಕೆ ಅಷ್ಟದ್ರವ್ಯ ಮಹಾಗಣಪತಿ ಮತ್ತು ನವಗ್ರಹ ಹೋಮ, ೧೧ ಗಂಟೆಗೆ ರಾಮಾಂಜನೇಯ ಭಜನಾ ಮಂಡಳಿಯಿAದ ಭಜನೆ, ೧೧.೧೫ಕ್ಕೆ ನವಗ್ರಹ ಮತ್ತು ನಾಗಪೂಜೆ, ೧೨.೩೦ಕ್ಕೆ ಮಹಾಪೂಜೆ, ಮಂಗಳಾರತಿ ನಡೆದು ಮಧ್ಯಾಹ್ನ ೧ ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಲಿದೆ ಎಂದು ದೇವಾಲಯ ಪ್ರಕಟಣೆ ತಿಳಿಸಿದೆ.