ಮಡಿಕೇರಿ, ಮೇ ೨೬: ಕುಂಡ್ಯೋಳAಡ ಕಪ್ ಹಾಕಿ ಉತ್ಸವದ ಯಶಸ್ಸಿಗೆ ಪ್ರಮುಖವಾಗಿ ಶ್ರಮಿಸಿರುವ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಅವರನ್ನು ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.

ಹಾಕಿ ಉತ್ಸವದ ಯಶಸ್ಸಿಗೆ ಪ್ರಾರ್ಥಿಸಿ ಕುಟುಂಬಸ್ಥರು ಈ ಬಾರಿ ವಿಶೇಷವಾಗಿ ಗುರುಕಾರೋಣರಿಗೆ ಹರಕೆ ಮಾಡಿಕೊಂಡಿದ್ದು, ನಿನ್ನೆ ಈ ಕಾರ್ಯವನ್ನು ನೆರವೇರಿಸಲಾಯಿತು. ಈ ಸಂದರ್ಭ ಐನ್‌ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಕಿ ಉತ್ಸವಕ್ಕೆ ಹೆಚ್ಚು ಶ್ರಮಿಸಿರುವ ದಿನೇಶ್ ಅವರಿಗೆ ಪೀಚೆಕತ್ತಿ ನೀಡುವ ಮೂಲಕ ಕುಟುಂಬಸ್ಥರು ಸನ್ಮಾನಿಸಿದರು.

ಈ ಸಂದರ್ಭ ಪಟ್ಟೆದಾರ ನಾಣಯ್ಯ, ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ, ಸುಬ್ಬಯ್ಯ ಸೇರಿದಂತೆ ಕುಟುಂಬದ ಪ್ರಮುಖರು, ತವರುಮನೆ ಹುಡುಗಿಯರು ಪಾಲ್ಗೊಂಡಿದ್ದರು.