ಸೋಮವಾರಪೇಟೆ, ಮೇ ೨೬: ಪಟ್ಟಣದ ವೆಂಕಟೇಶ್ವರ ಬ್ಲಾಕ್‌ನ ಶ್ರೀ ಮಾರಿಯಮ್ಮ ದೇವಾ ಲಯದಲ್ಲಿ ಆದಿಕರ್ನಾಟಕ ಸಮಾಜ ಮತ್ತು ಶ್ರೀ ಮಾರಿಯಮ್ಮ ಯುವಕ ಮಿತ್ರ ಮಂಡಳಿ ವತಿ ಯಿಂದ ಅದ್ಧೂರಿಯಾಗಿ ೭೫ನೇ ವರ್ಷದ ವಾರ್ಷಿಕ ಪೂಜೆ ನಡೆಯಿತು.

ಶ್ರೀ ಮಾರಿಗುಡಿಯಲ್ಲಿ ಬೆಳಿಗ್ಗೆ ವಿವಿಧ ಪೂಜೆಗಳೊಂದಿಗೆ ಮಹಾ ಮಂಗಳಾರತಿ, ನಂತರ ಶ್ರೀ ಮಾರಿಯಮ್ಮ ಪೂಜೆ ಜರುಗಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಶ್ರೀ ಮಾರಿಯಮ್ಮ ಯುವಕ ಮಿತ್ರ ಮಂಡಳಿ ಅಧ್ಯಕ್ಷ ಎಚ್.ಆರ್. ಹೇಮಂತ್, ಪದಾಧಿಕಾರಿಗಳಾದ ಪ್ರೇಮ, ಪ್ರಮೋದ್, ವಸಂತ, ಶ್ರೀಕಾಂತ್, ಜವರಪ್ಪ, ಸರಿತಾ ಮತ್ತಿತರರು ಇದ್ದರು.