ಕರಿಕೆ, ಮೇ ೨೬: ಇಲ್ಲಿಗೆ ಸಮೀಪದ ಚೆತ್ತುಕಾಯ ಬಿಳಿಯ ಪಚ್ಚೆಪಿಲಾವು, ಹದಿ ಮೂರನೇ ಮೈಲು ಸಂಪರ್ಕ ಕಲ್ಪಿಸುವ ಜಿ.ಪಂ. ರಸ್ತೆಯು ಭಾರಿ ಮಳೆಯಿಂದ ಕುಸಿದು ಸೇತುವೆಗೂ ಹಾನಿ ಯಾಗಿದೆ.

ಸೇತುವೆ ಬದಿ ಯ ರಸ್ತೆ ಸುಮಾರು ೫ ಮೀಟರ್‌ನಷ್ಟು ಕೊಚ್ಚಿ ಹೋಗಿದ್ದು, ಮಳೆಗಾಲದಲ್ಲಿ ಸೇತುವೆ ಕುಸಿದು ಸಂಪೂರ್ಣವಾಗಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದ್ದು, ಈ ಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಹೆಚ್ಚಾಗಿ ವಾಸಿಸುತ್ತಿದ್ದು, ಜಿಲ್ಲಾಡಳಿತ ಕೂಡಲೇ ಇತ್ತ ಗಮನಹರಿಸಿ ಸೂಕ್ತ ರೀತಿಯಲ್ಲಿ ದುರಸ್ತಿ ಮಾಡಲು ಕ್ರಮವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಸುಧೀರ್ ಹೊದ್ದೆಟ್ಟಿ