ವೀರಾಜಪೇಟೆ, ಮೇ ೨೬: ಶೌಚಾಲಯಕ್ಕೆ ತೆರಳಿದ್ದ ವ್ಯಕ್ತಿ ಹೃದಯಘಾತಕ್ಕೊಳಗಾಗಿ ಸಾವಿಗೀಡಾದ ಘಟನೆ ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ನಾಪೋಕ್ಲು ಸಮೀಪದ ಕೊಳಕೇರಿ ನಿವಾಸಿ ಮಾಚಯ್ಯ ಎಂಬವರ ಪುತ್ರ ದಿನೇಶ್ (೩೮) ಮೃತ ದುರ್ದೆÊವಿ. ನಾಂಗಾಲ ಗ್ರಾಮದಲ್ಲಿರುವ ತಂಗಿ ಮನೆಗೆಂದು ಹೊರಟು ಬಂದಿದ್ದ ದಿನೇಶ್ ಅವರು ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ತೆರಳಿದ್ದ ಸಂದರ್ಭ ದಿಢೀರ್ ಹೃದಯಘಾತಕ್ಕೊಳಗಾಗಿ ಅಲ್ಲಿಯೇ ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆ. ವೀರಾಜಪೇಟೆ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡರು.