ಕೂಡಿಗೆ, ಮೇ ೨೭: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಿಟಕಿ ಗಾಜಿಗೆ ಕಿಡಿಗೇಡಿಗಳು ಹಾನಿಗೊಳಿಸಿ ಪುಂಡಾಟ ತೋರಿದ್ದಾರೆ. ಕಲ್ಲು ಹೊಡೆದು ಕಿಟಕಿ ಗಾಜನ್ನು ಒಡೆದು ಹಾಕಿರುವ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಂ. ಭಾಗ್ಯ ಮತ್ತು ಸಹ ಶಿಕ್ಷಕರು ಪೊಲೀಸ್ ದೂರು ನೀಡಿ ದ್ದಾರೆ. ಪೊಲೀಸರು ಶಾಲೆಗೆ ಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಾಲೆಯ ಆವರಣದಲ್ಲಿ ಪ್ರತಿನಿತ್ಯ ಮದ್ಯ ಸೇವನೆ, ಗಾಂಜಾ ಸೇವನೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.