ಸಿದ್ದಾಪುರ, ಮೇ ೨೮: ಅಪ ರಿಚಿತ ವ್ಯಕ್ತಿ ಯೋರ್ವರು ಇಂದು ಮಧ್ಯಾಹ್ನ ನೆಲ್ಯಹುದಿಕೇರಿಯ ಕಾವೇರಿ ನದಿಗೆ ಹಾರಿದ್ದು, ಇದನ್ನು ಗಮನಿಸಿದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಇಲಾಖೆಯ ೧೧೨ ರ ಸಿಬ್ಬಂದಿಗಳು ಮತ್ತು ಸ್ಥಳೀಯರು ರಕ್ಷಿಸಿದ್ದಾರೆ. ಈ ವ್ಯಕ್ತಿ ಅಪರಿಚಿತ ರಾಗಿದ್ದು, ತನ್ನ ಹೆಸರು ಅಣ್ಣು, ಊರು ಮಾದಾಪುರ ಸಮೀಪದ ಹೊಸತೋಟ ಗ್ರಾಮದವರು ಎಂದು ಹೇಳಿಕೊಂಡಿದ್ದಾರೆ. ಇವರ ಕುಟುಂಬಸ್ಥರು ಅಥವಾ ಪರಿಚಿತರು ಇದ್ದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.