ಮಡಿಕೇರಿ, ಮೇ ೨೭: ಪತ್ರಕರ್ತೆ ಹಾಗೂ ಸಾಹಿತಿ ರಜಿತ ಕಾರ್ಯಪ್ಪ ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿನ ಸೇವೆಯನ್ನು ಪರಿಗಣಿಸಿ ಸಾಧನಾ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಗತಿ ಸೇವಾ ಟ್ರಸ್ಟ್ ಪಾಂಡವಪುರ ಹಾಗೂ ಅಮ್ಮನ ಆಸರೆ ಚಾರಿಟೇಬಲ್ ಟ್ರಸ್ಟ್ನ ಸಂಯುಕ್ತ ಆಶ್ರಯದಲ್ಲಿ ಡಾ. ನಾಗೇಶ್ ರಾಗಿಮುದ್ದನಹಳ್ಳಿ ಅವರ ಜನ್ಮದಿನದ ಅಂಗವಾಗಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಾಗನಹಳ್ಳಿ ಗ್ರಾಮದ ಅಮ್ಮನ ಆಸರೆ ಚಾರಿಟೇಬಲ್ ಟ್ರಸ್ಟ್ ಉಚಿತ ವೃದ್ಧಾಶ್ರಮದಲ್ಲಿ ಗಣ್ಯರು ರಜಿತ ಕಾರ್ಯಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಈ ಸಂದರ್ಭ ಸರಕಾರಿ ಉಪವಿಭಾಗೀಯ ವೈದ್ಯಾಧಿಕಾರಿ ಡಾ. ಅರವಿಂದ್, ಪ್ರಗತಿ ಸೇವಾ ಟ್ರಸ್ಟ್ನ ಅಧ್ಯಕ್ಷ ಡಾ. ನಾಗೇಶ್ ರಾಗಿಮುದ್ದನಹಳ್ಳಿ, ನಿರ್ದೇಶಕರಾದ ಎಂ.ಹೆಚ್. ವಿಜಯಕುಮಾರ್ ಮಲ್ಲಿಗೆರೆ, ಡಾ. ವಿಜಯಕುಮಾರ್ ಬಲ್ಲೇನಹಳ್ಳಿ, ಅಮ್ಮನ ಆಸರೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಪ್ರಭುಸ್ವಾಮಿ, ಕಾರ್ಯದರ್ಶಿ ಪುಷ್ಪಾವತಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.