ಸಿದ್ದಾಪುರ, ಮೇ ೨೭: ಊಟ ಖಾಲಿಯಾಗಿದೆ ಎಂದು ಹೇಳಿದ ಕಾರಣಕ್ಕೆ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಹೊಟೇಲ್‌ಗೆ ಭಾನುವಾರ ರಾತ್ರಿ ನಾಲ್ವರು ಯುವಕರು ತೆರಳಿ ಊಟ ಕೇಳಿದ್ದು, ಈ ಸಂದರ್ಭದಲ್ಲಿ ಹೋಟೆಲ್ ಸಿಬ್ಬಂದಿ ಊಟ ಖಾಲಿಯಾಗಿದೆ ಎಂದು ಹೇಳಿದ ಸಂದರ್ಭದಲ್ಲಿ ನಾಲ್ವರು ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಕೊಲೆ ಬೆದರಿಕೆ ಯೊಡ್ಡಿರುವುದಾಗಿ ಸಂತ್ರಸ್ತೆ ದೂರು ನೀಡಿದ್ದರು. ಪೊಲೀಸರು ಆರೋಪಿ ಗಳಾದ ನೆಲ್ಯಹುದಿಕೇರಿಯ ಎಂ.ಜಿ ಕಾಲೋನಿ ನಿವಾಸಿ ಅಂತೋಣಿ (೩೫), ನೆಲ್ಯಹುದಿಕೇರಿ ಶಾಲೆ ರಸ್ತೆ ನಿವಾಸಿ ವಿಲ್ಸನ್ ಕೆ.ಎಸ್. (೨೬), ಸೆಲ್ವೇಸ್ (೩೮), ಸಿದ್ದಾಪುರ ನಿವಾಸಿ ಅಜೀಜ್(೪೪) ಎಂಬವರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.