ಶನಿವಾರಸAತೆ, ಮೇ ೨೯: ಸಮೀಪದ ಬಾಗೇರಿ ಗ್ರಾಮದ ಶ್ರೀ ರಾಮೇಶ್ವರ ಸ್ವಾಮಿ ದೇವಾಲಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜೂ. ೨ ಮತ್ತು ೩ ರಂದು ನಡೆಯಲಿದೆ. ತಾ. ೨ ರ ರಾತ್ರಿ ೭.೩೦ ಗಂಟೆಯಿAದ ದೇವಾಲಯದ ಪುರೋಹಿತರಾದ ಶಂಕರನಾರಾಯಣ ಭಟ್ ಅವರ ನೇತೃತ್ವದಲ್ಲಿ ಮಹಾಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ನವಗ್ರಹ, ಮೃತ್ಯುಂಜಯ, ಅಷ್ಟದಿಕ್ಪಾಲಕರು, ವಾಸ್ತುಪೂಜೆ ಮತ್ತು ಹೋಮವಿಧಿ ನಡೆಯುತ್ತದೆ. ೧೦.೩೦ಕ್ಕೆ ದಿಕ್ ಬಲಿ, ಪ್ರಧಾನ ಸೂತ್ರ ಪರಿವೇಷ್ಟನೆ ಪೂಜೆ ನಡೆಯಲಿದೆ. ತಾ. ೩ ರ ಪ್ರಾತಃಕಾಲ ೫.೩೦ ರಿಂದ ಗಂಗಾಪೂಜೆ, ಬ್ರಹ್ಮಕಲಶ ಪೂಜೆ, ದೇವಾಲಯ ಪ್ರವೇಶ, ಬ್ರಹ್ಮಕಲಶ ಸ್ಥಾಪನೆ, ೮ ಗಂಟೆಯಿAದ ಸ್ವಾಮಿಗೆ ಫಲಪಂಚಾಮೃತ ಪೂರ್ವಕ ಏಕದಶಾದ ರುದ್ರಾಭಿಷೇಕ, ಅಲಂಕಾರ ಸೇವೆ, ೧೦ ಗಂಟೆಯಿAದ ರುದ್ರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಮಧ್ಯಾಹ್ನ ೧೨ ಗಂಟೆಗೆ ಸಭಾ ವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ, ಆರ್ಥಿಕ ಸಹಾಯ- ಗಣ್ಯರು ಹಾಗೂ ಕಾರ್ಯಕರ್ತರಿಗೆ ಗೌರವ ಸಮರ್ಪಣೆ ಹಾಗೂ ೧.೩೦ ರಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.