ಕರಿಕೆ, ಮೇ ೨೯: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕರಿಕೆ ಘಟಕದ ವತಿಯಿಂದ ಚಾಮುಂಡೇಶ್ವರಿ ವಿದ್ಯುತ್ ನಿಗಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪದವಿ ಸ್ವೀಕರಿಸಿದ ಸಿದ್ಧಲಿಂಗ ಯದವಾಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಹಕಾರಿ ಕೃಷಿ ಪತ್ತಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಪ್ರಕಾಶ್ ಗುಡ್ಡೆಮನೆ ಅಧ್ಯಕ್ಷತೆ ವಹಿಸಿದ್ದರು. ಹೊದ್ದೆಟ್ಟಿ ಸುಧೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಕುದುಪಜೆ ಗಣೇಶ್, ಜಯಂತ್ ಪೆತ್ತಾಜೆ, ಬಿ.ಎ. ಗಣೇಶ್, ಕುದುಪಜೆ ರವಿ, ಕೋಡಿ ಭಾರ್ಗವ್, ಪ್ರಕಾಶ್, ಚೇತನ್ ಹುಲಿಮನೆ, ಮಾವಜಿ ಜಯಪ್ರಕಾಶ್, ಅಕ್ಷಿತ್ ಹೊದ್ದೆಟ್ಟಿ ಮತ್ತಿತರರು ಹಾಜರಿದ್ದರು.