ಸೋಮವಾರಪೇಟೆ, ಮೇ ೩೦: ತಾಲೂಕಿನ ಗರಗಂದೂರು ಬಿ. ಗ್ರಾಮದಲ್ಲಿರುವ ಶ್ರೀ ಗುರು ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು.

ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

ಸಮಿತಿ ಪುನರ್ ರಚನೆ

ವಾರ್ಷಿಕ ಪೂಜೋತ್ಸವದ ನಂತರ ದೇವಾಲಯ ಆಡಳಿತ ಮಂಡಳಿಯನ್ನು ಪುನರ್ ರಚಿಸಲಾಯಿತು.

ಅಧ್ಯಕ್ಷರಾಗಿ ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ರೋಹಿತ್ ಅವರನ್ನು ಮುಂದುವರೆಸುವAತೆ ತೀರ್ಮಾನಿಸಲಾಯಿತು.

ಸಮಿತಿ ಉಪಾಧ್ಯಕ್ಷರಾಗಿ ಕೆ.ಡಿ. ವೀರಪ್ಪ, ಖಜಾಂಚಿಯಾಗಿ ಲಿಖಿತ್ ದಾಮೋದರ್, ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ಗರಗಂದೂರು ಬಿ. ಗ್ರಾಮಕ್ಕೆ ಒಳಪಡುವ ಉಪಗ್ರಾಮದಿಂದ ೧೫ ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಯಿತು.