ಕೂಡಿಗೆ, ಮೇ ೩೧: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಬಳಿಯ ಸುಂದರನಗರದಲ್ಲಿ ನಡೆದ ರಸ್ತೆ ಅಪಘಾತ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಚಿಕ್ಕತ್ತೂರಿನ ಮಹದೇವ್ ಎಂಬವರ ಪುತ್ರ ಶಿವಶಂಕರ್ (೨೨) ಮೃತ ಯುವಕ. ಹಾರಂಗಿ ಕುಶಾಲನಗರ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆ ಸಮೀಪ ಶಿವಶಂಕರ್ ಚಲಾಯಿಸುತ್ತಿದ್ದ ಬೈಕ್ ಮುಂದೆ ಹೋಗುತ್ತಿದ್ದ ಟ್ರಾö್ಯಕ್ಟರ್‌ಗೆ ಹಿಂಬದಿಯಿAದ ಡಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಶಿವಶಂಕರ್ ದುರ್ಮರಣಕ್ಕೀಡಾಗಿದ್ದಾನೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.