ಮಡಿಕೇರಿ, ಮೇ ೩೦: ಓಮ್ನಿ ವ್ಯಾನ್ ಹಾಗೂ ಹೋಂಡಾ ಆ್ಯಕ್ಟೀವಾ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಡಿಕೇರಿ ಸಂಚಾರಿ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿಯಾಗಿರುವ ಕರ್ತಮಯ್ಯ ಎಂಬವರು ಇಂದು ಕೊಳಗದಾಳುವಿನಿಂದ ಮಡಿಕೇರಿಗೆ ಕರ್ತವ್ಯಕ್ಕೆಂದು ತಮ್ಮ ಓಮ್ನಿ ವ್ಯಾನ್ (ಕೆ.ಎ. ೧೨ - ಎಂ ೯೯೦೪) ನಲ್ಲಿ ಪತ್ನಿಯೊಂದಿಗೆ ಬರುತ್ತಿದ್ದಾಗ ಮಡಿಕೇರಿಯಿಂದ ಚೇರಂಬಾಣೆಗೆ ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದ ಸಂತೋಷ್‌ಕುಮಾರ್ ಎಂಬವರ ಸ್ಕೂಟಿ (ಕೆ.ಎ. ೧೨ - ಡಬ್ಲುö್ಯ ೮೯೭೪) ನಡುವೆ ಕಾರುಗುಂದ ಗೌಡ ಸಮಾಜದ ಎದುರು ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಸ್ಕೂಟಿ ಚಾಲಕ ಸಂತೋಷ್ ಕುಮಾರ್ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತೆÀ್ರಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಆದರೆ ಗಂಭೀರ ಗಾಯ ಗೊಂಡಿದ್ದರಿAದ ಚಿಕಿತ್ಸೆ ಫಲಕಾರಿ ಯಾಗದೆ ರಾತ್ರಿ ವೇಳೆ ಸಾವನ್ನಪ್ಪಿ ದ್ದಾನೆ. ಕರ್ತಮಯ್ಯ ಅವರ ಪತ್ನಿ ಜಯಂತಿ ಅವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಂತೋಷ್ ಕುಮಾರ್ ಮೂಲತಃ ಯವಕಪಾಡಿ ಯವರಾಗಿದ್ದು, ಮಡಿಕೇರಿ ಕಂಚಿ ಕಾಮಾಕ್ಷಿ ದೇವಾಲಯದ ಬಳಿ ನೆಲೆಸಿದ್ದರು. ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

- ಟಿ.ಜಿ. ಸತೀಶ್