ವೀರಾಜಪೇಟೆ, ಮೇ ೩೦: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ದಂಡ ಸಹಿತ ಜೈಲು ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ.

ನಗರದ ನಿಸರ್ಗ ಲೇಔಟ್ ನಿವಾಸಿ ಟಿ.ಆರ್. ರಿನಿಶ್ ಎಂಬವರು ಎ.ಆರ್. ಫೈನಾನ್ಸ್ನಿಂದ ೨೦೧೮ರಲ್ಲಿ ರೂ. ೨.೫೦ ಲಕ್ಷ ಹಣವನ್ನು ಸಾಲ ಪಡೆದು ಚೆಕ್ ನೀಡಿದ್ದು, ಫೈನಾನ್ಸ್ ಅವರು ಬ್ಯಾಂಕಿಗೆ ಚೆಕ್ಕನ್ನು ಸಲ್ಲಿಸಿದಾಗ ಚೆಕ್ ಅಮಾನ್ಯಗೊಂಡಿತ್ತು. ನಂತರ ವಕೀಲರ ಮೂಲಕ ನೋಟೀಸ್ ನೀಡಿದರೂ ಹಣ ಪಾವತಿಸದ ಕಾರಣ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿತ್ತು.

ಪ್ರಕರಣವನ್ನು ವಿಚಾರಣೆಗೊಳಿಸಿದ ನ್ಯಾಯಾಧೀಶರಾದ ಸಂತೋಷ್ ಕೊಠಾರಿಯವರು ಆರೋಪಿ ರೂ. ೩.೩೫ ಲಕ್ಷ ಮೊತ್ತ ಫೈನಾನ್ಸ್ ಕಂಪೆನಿಗೆ ಪಾವತಿಸುವುದರೊಂದಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ಆದೇಶಿಸಿದ್ದಾರೆ.