ಸುAಟಿಕೊಪ್ಪ, ಮೇ ೩೧: ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದ ೨೦ನೇ ವಾರ್ಷಿಕೋತ್ಸವ ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊAಡಿತು.

ದೇವಾಲಯದ ಪ್ರಧಾನ ಅರ್ಚಕ ಮಹಾಬಲಭಟ್ ಹಾಗೂ ಹಿರಿಯ ಅರ್ಚಕ ಹಾ.ಮಾ.ಗಣೇಶ್ ಶರ್ಮಾ ನೇತೃತ್ವದಲ್ಲಿ ನಾಗಮಂಡಲದ ಅರ್ಚಕರಾದ ಸಂತೋಷ್ ಹೆಬ್ಬಾರ್, ರಾಘವೇಂದ್ರ ಭಟ್, ರವಿ ಭಟ್ ಅವರು ಬೆಳಿಗ್ಗೆ ದೇವರಿಗೆ ಶುದ್ಧಪೂಜೆ, ಪ್ರಾರ್ಥನೆ, ಪುಣ್ಯಾಹವಾಚನ ಮಾಡಲಾಯಿತು.

ಆನಂತರ ಜಲಕುಂಭಗಳನ್ನು ಹರದೂರು ಹೊಳೆಯಿಂದ ತಂದು ದೇವರಿಗೆ ಅಭಿಷೇಕÀ ಮಾಡಲಾಯಿತು. ಬಳಿಕ ನವಗ್ರಹ ಹೋಮ, ಪೂರ್ವಕ ೯ ತೆಂಗಿನಕಾಯಿಗಳ ಗಣಹೋಮ, ಪೂರ್ಣಾಹುತಿಯ ನಂತರ ದೇವರಿಗೆ ಪಂಚಾಮೃತಾಭಿಷೇಕ ಪೂರ್ವಕ ತವಕ, ಕಳಸಾಭಿಷೇಕ ಪೂರ್ವಕ ಮಹಾಪೂಜೆ ನಡೆಯಿತು.

ಮಧ್ಯಾಹ್ನ ಮಹಾಮಂಗಳಾರತಿ ಅಷ್ಟಾವÀಧಾನ ಸೇವೆ, ತೀರ್ಥ ಪ್ರಸಾದ ವಿನಿಯೋಗದ ನಂತರ ನೆರೆದಿದ್ದ ನೂರಾರು ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂರ್ಪಣೆ ಏರ್ಪಡಿಸಲಾಗಿತ್ತು.

ದೇವಾಲಯದ ಟ್ರಸ್ಟಿ ಎ. ಲೋಕೇಶ್ ಕುಮಾರ್, ಉತ್ಸವ ಸಮಿತಿಯ ಅಧ್ಯಕ್ಷ ಎಂ. ಮಂಜುನಾಥ್, ಕಾರ್ಯದರ್ಶಿ ಸುನಿಲ್ ಕುಮಾರ್, ಪದಾಧಿಕಾರಿಗಳಾದ ಸದಾಶಿವ ರೈ, ಚಂದು ಸುರೇಶ್, ಅರುಣ್ ಪೂಜಾರಿ, ದಿವಾಕರ ರೈ, ರಮೇಶ್ ಪೂಜಾರಿ, ವಸಂತ, ಬಿ.ಎಂ. ಸುರೇಶ್, ಸುರೇಶ್ ಗೋಪಿ ಸೇರಿದಂತೆ ಇತರರು ಇದ್ದರು. ಸುಂಟಿಕೊಪ್ಪ, ಪನ್ಯ, ಬೆಟ್ಟಗೇರಿ, ಹರದೂರು ಸೇರಿದಂತೆ ಹಲವು ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.