ಐಗೂರು, ಮೇ ೩೧: ಹೊಸತೋಟದ ಕ್ರಿಕೆಟ್ ಕ್ಲಬ್ ವತಿಯಿಂದ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಿತು. ಪಂದ್ಯಾಟವನ್ನು ಸ್ಥಳೀಯ ಕಾಫಿ ಬೆಳೆಗಾರ ಲಿಖಿತ್ ಮೂಡಗದ್ದೆ ಮತ್ತು ಗರಗಂದೂರು ಗ್ರಾ.ಪಂ. ಉಪಾಧ್ಯಕ್ಷ ಸಲೀಂ ಹೊಸತೋಟ ಉದ್ಘಾಟಿಸಿದರು.

ದೀಪು ಫ್ರೆಂಡ್ಸ್, ಎಂ.ಎಸ್.ಡಿ., ಭೀಮ್ ರೈಡರ್ಸ್ ಮತ್ತು ಕ್ಯಾಪ್ಟನ್ ಕೂಲ್ ತಂಡಗಳು ಸೆಮಿಫೈನಲ್ ಹಂತದಲ್ಲಿ ಸೆಣಸಾಟ ನಡೆಸಿ ಕೊನೆಗೆ ಭೀಮ್ ರೈಡರ್ಸ್ ಮತ್ತು ಕ್ಯಾಪ್ಟನ್ ಕೂಲ್ ತಂಡಗಳು ಫೈನಲ್ ಹಂತಕ್ಕೆ ಪ್ರವೇಶಿಸಿತು. ಫೈನಲ್ ಪಂದ್ಯಾಟದಲ್ಲಿ ಭೀಮ್ ರೈಡರ್ಸ್ ತಂಡವು ಕ್ಯಾಪ್ಟನ್ ಕೂಲ್ ತಂಡವನ್ನು ಮಣಿಸಿ ಪ್ರಥಮ ಬಹುಮಾನದ ಮೊತ್ತ ರೂ. ೭,೦೦೦ ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ಕ್ಯಾಪ್ಟನ್ ಕೂಲ್ ತಂಡವು ಬಹುಮಾನದ ಮೊತ್ತ ರೂ. ೫,೦೦೦ ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ತೃತೀಯ ಸ್ಥಾನಕ್ಕೆ ದೀಪು ಫ್ರೆಂಡ್ಸ್ ತೃಪ್ತಿ ಪಟ್ಟುಕೊಂಡಿತು. ಮ್ಯಾನ್ ಆಫ್‌ದ ಸೀರಿಸ್ ಆಗಿ ಭೀಮ್ ರೈಡರ್ಸ್ನ ಪ್ರವೀಣ, ಬೆಸ್ಟ್ ಬ್ಯಾಟ್ಸ್ಮ್ಯಾನ್ ಆಗಿ ಟೀಮ್ ಎಂ.ಎಸ್.ಡಿ. ಸಂದೀಪ್ ಚೇತನ್, ಬೆಸ್ಟ್ ಬೌಲರ್, ಬೆಸ್ಟ್ ಫೀಲ್ಡರ್ ಆಗಿ ಭೀಮ್ ರೈಡರ್ಸ್ನ ಪ್ರವೀಣ್ ಹೊರಹೊಮ್ಮಿದರು.

ಪಂದ್ಯದ ವೀಕ್ಷಕ ವಿವರಣೆಯನ್ನು ರಹಮಾನ್ ಅಂದು ನೀಡಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷ ಸಲೀಂ ಹೊಸತೋಟ, ಪಿ.ಡಿ.ಓ. ರವಿ ನಾಯರ್, ಬೆಳೆಗಾರ ಲಿಖಿತ್ ಮೂಡಗದ್ದೆ, ಗ್ರಾ.ಪಂ. ಮಾಜಿ ಸದಸ್ಯ ಕೋಯ, ಸಂದೇಶ್, ರಜಾಕ್ ಮತ್ತು ನಸೀರ್ ಭಾಗವಹಿಸಿದ್ದರು.