ಶನಿವಾರಸಂತೆ, ಜೂ. ೨: ಪಟ್ಟಣದ ಪತಂಜಲಿ ಯೋಗಸಂಸ್ಥೆ, ಯೋಗಬಂಧುಗಳು ಹಾಗೂ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಸಹಯೋಗದಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಉಚಿತ ಯೋಗ ಶಿಬಿರವನ್ನು ತಾ.೩ ರಿಂದ ೨೧ ರವರೆಗೆ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜೂ.೧೫ ಶನಿವಾರ ಮೈಸೂರಿನ ಯೋಗಾಚಾರ್ಯ ಬಿ.ಪಿ.ಮೂರ್ತಿ ಅವರು ಯೋಗಾಸನ ಪ್ರದರ್ಶನ ಹಾಗೂ ಯೋಗದ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಜೂ.೧೯ರ ಗುರುವಾರ ಯೋಗ ಗುರು ಮಲ್ಲಿಕಾರ್ಜುನ ಸ್ವಾಮಿ ಹಾಗೂ ನೇತ್ರಾವತಿಸ್ವಾಮಿ ಅವರಿಂದ ಪ್ರಾಣಾಯಾಮ ಹಾಗೂ ಆಸನಗಳ ಪ್ರಾತ್ಯಕ್ಷಿಕೆ ಇದೆ. ಜೂ.೨೧ ರಂದು ಶುಕ್ರವಾರ ಬೆಂಗಳೂರಿನ ಯೋಗಶಿಕ್ಷಕ ಪುಟ್ಟನಂಜಪ್ಪ ಅವರು “ಅಂತರ ರಾಷ್ಟಿçÃಯ ಯೋಗ ದಿನದ ಅರಿವು’’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾರೆ ಎಂದು ಪತಂಜಲಿ ಯೋಗಸಂಸ್ಥೆಯ ಯೋಗ ಶಿಕ್ಷಕ ಎ.ಡಿ.ಮೋಹನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.