ಮಡಿಕೇರಿ, ಜೂ. ೨ : ಮಾಧ್ಯಮಗಳು ಹಾಗೂ ಪತ್ರಕರ್ತರು ಇಲ್ಲದೆ ಸಂವಿಧಾನವೇ ಇಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು. ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಬೆಳ್ಳಿ ಮಹೋತ್ಸವದ ಸ್ಮರಣ ಸಂಚಿಕೆ ‘ಪಿಂಜರಿ'ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಜತ ಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಪತ್ರಕರ್ತರು ಸಂಭ್ರಮಿಸು ವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿರುವುದು ಗಮನಾರ್ಹವಾಗಿದೆ. ಪ್ರೆಸ್‌ಕ್ಲಬ್ ೨೫ ವರ್ಷಗಳ ಕಾಲ ನಡೆದು ಬಂದ ಹಾದಿ ಯನ್ನು ಯಾರೂ ಮರೆಯ ಬಾರದು. ಸ್ಮರಣ ಸಂಚಿಕೆಗಳಿAದ ಮಾಡಿದ ಕೆಲಸ ದಾಖಲೆಯಾಗಿ ಉಳಿದುಕೊಂಡು ಮುಂದಿನ ಪೀಳಿಗೆಗೆ ದಾರಿದೀಪ ವಾಗಲಿದೆ. ಕ್ಲಬ್ ಈ ಮಟ್ಟಕ್ಕೆ ಬೆಳೆಯಲು ಹಲವರ ಕೊಡುಗೆ ಇದೆ. ಸಂಘಟನೆ ಮತ್ತಷ್ಟು ಬಲವಾಗಿ ಬೆಳೆಯಲಿ ಎಂದು ಆಶಿಸಿದರು.

ಪತ್ರಕರ್ತರು ಹಲವಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರ ನಡುವೆ ತನಗೆ ಒಡನಾಟ ಇರುವ ಕಾರಣ ಪತ್ರಕರ್ತರ ನೋವು-ನಲಿವಿನ ಪೂರ್ಣ ಅರಿವಿದೆ. ಪತ್ರಕರ್ತರು ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಪರಿಹಾರಕ್ಕೆ ಮುಂದಾಗಬೇಕು ಎಂದು ಕರೆ ನೀಡಿದ ಅವರು, ಸಮಸ್ಯೆ ಪರಿಹಾರಕ್ಕೆ ಎಂದಿಗೂ ಜೊತೆಗಿರುವೆ ಎಂದು ಅಭಯ ನೀಡಿದರು. ಸಂವಿಧಾನದ ಆಶಯ ಈಡೇರ ಬೇಕಾದರೆ ಪತ್ರಕರ್ತರು ಅನಿವಾರ್ಯ ವಾಗಿದ್ದಾರೆ ಎಂದರು. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಉದ್ಯಮಿ ನಾಪಂಡ ಮುದ್ದಪ್ಪ ಮಾತನಾಡಿ, ಸಾಂಪ್ರದಾಯಿಕ ಮಾಧ್ಯಮಗಳು ಸಂದಿಗ್ಧತೆಯಲ್ಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಶೀಘ್ರ ಸುದ್ದಿ ಹರಡುತ್ತಿದ್ದರೂ, ಅದರ ನೈಜಾಂಶ ಪತ್ರಿಕೆಯ ಮೂಲಕವೇ ಜನರಿಗೆ ತಿಳಿಯುವ ಅನಿವಾರ್ಯತೆ ಇದೆ. ಪ್ರಜಾಪ್ರಭುತ್ವವನ್ಮು ಆರೋಗ್ಯಯುತವಾಗಿ ಮುನ್ನಡೆಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಆಚರಣಾ ಸಮಿತಿ ಮಹಾಪೋಷಕ ರಾದ ಜಿ. ರಾಜೇಂದ್ರ ಮಾತನಾಡಿ, ಎಲ್ಲಾ ಕ್ಷೇತ್ರದವರನ್ನು ಭಾಗಿ ಗೊಳಿಸಿಕೊಂಡು, ಕೇವಲ ಪ್ರಚಾರಕ್ಕಲ್ಲದೆ, ಕ್ಲಬ್ ರಜತ ಮಹೋತ್ಸವವನ್ನು ಅರ್ಥಪೂರ್ಣ ಹಾಗೂ ಪ್ರಯೋಜನಕಾರಿಯಾಗಿ ಆಚರಿಸಿದೆ. ಸ್ಮರಣ ಸಂಚಿಕೆ ಸಂಘಟನೆ ಕಾರ್ಯಚಟುವಟಿಕೆಯ ದಾಖಲೆ ಯಾಗಿ ಉಳಿಯಲಿದೆ. ಪ್ರೆಸ್ ಕ್ಲಬ್ ಮೂಲಕ ಸಹಕಾರಿ ಸಂಘ ಸ್ಥಾಪನೆ ಮಾಡುತ್ತಿರುವುದು ಪ್ರಶಂಸನೀಯ. ಇದರಲ್ಲಿ ಯಾವುದೇ ಕುಂದು-ಕೊರತೆ ಬಾರದಂತೆ ನಿಗಾವಹಿಸಿ ಆರ್ಥಿಕ ಶಿಸ್ತು ಕಾಯ್ದುಕೊಂಡು ಸದಸ್ಯರಿಗೆ ಸಹಕಾರಿಯಾಗುವಂತೆ ಮುನ್ನಡೆಯಲಿ ಎಂದು ಆಶಿಸಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಕ್ಲಬ್ ಬೆಳ್ಳಿಮಹೋತ್ಸವದ ಅಂಗವಾಗಿ ಮಾಡಿದ ಕಾರ್ಯಕ್ರಮಗಳು ಇತರೆ ಸಂಘಟನೆಗಳಿಗೆ ಮಾದರಿಯಾಗಿವೆ. ವೃತ್ತಿ ಒತ್ತಡದಲ್ಲಿರುವ ಪತ್ರಕರ್ತರ ಮನೋಲ್ಲಾಸಕ್ಕೆ ಹತ್ತು ಹಲವು ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ. ಹಲವು ಹಿರಿಯರು ಶ್ರಮಿಸಿದ ಫಲವಾಗಿ ಇಂದು ಸಂಘಟನೆ ಭದ್ರವಾಗಿ ನೆಲೆಯೂರಿದೆ. ಪತ್ರಕರ್ತರು ಧಾವಂತವಾಗಿ ಸುದ್ದಿ ನೀಡುವ ಮುನ್ನ ಅದರ ಸತ್ಯಾಸತ್ಯತೆ ಅರಿತುಕೊಳ್ಳುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ೨೫ ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಹಲವಷ್ಟು ಕಾರ್ಯಕ್ರಮಗಳನ್ನು ಮಾಡಿ ರಜತ ಸಂಭ್ರಮವನ್ನು ಆಚರಿಸಿದ್ದೇವೆ. ಸದಸ್ಯರ ಹಿತಾಸಕ್ತಿ ಕಾಪಾಡುವ, ಸಾರ್ವಜನಿಕರನ್ನು ಒಳಗೊಂಡ ಹಲವು ಕಾರ್ಯಕ್ರಮ ಮಾಡಲಾಗಿದೆ. ಕಾರ್ಯಕ್ರಮ ಜೀವಂತವಾಗಿಡಲು ಸ್ಮರಣ ಸಂಚಿಕೆಯನ್ನು ಹೊರತರಲಾಗಿದ್ದು, ಕೊಡಗಿನ ವಿವಿಧ ವಿಚಾರಗಳ ಬಗ್ಗೆಗಿನ ಲೇಖನಗಳನ್ನು ಸಂಚಿಕೆ ಒಳಗೊಂಡಿದೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷವಿಡಿ ವೈವಿಧ್ಯಮಯ, ಸಮಾಜಮುಖಿ ಹಾಗೂ ಜನಸ್ನೇಹಿ ಕಾರ್ಯಕ್ರಮವನ್ನು ಆಚರಿಸಿ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣಗೊಳಿಸಲಾಗಿದೆ. ಸಂಘಟನೆಯ ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕೊಡಗು ಜಿಲ್ಲೆಯ ಪತ್ರಕರ್ತರಲ್ಲಿ ಪ್ರಾಮಾಣಿಕತೆ, ಬದ್ಧತೆ ಇದೆ ಎಂದು ಶ್ಲಾಘಿಸಿದರು.

ರೇಖಾ ಗಣೇಶ್ ಪ್ರಾರ್ಥಿಸಿ, ಸಂಘಟನಾ ಕಾರ್ಯದರ್ಶಿ ಎಂ.ಎನ್.ಚAದ್ರಮೋಹನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ನಿರೂಪಿಸಿ, ನವೀನ್ ಡಿಸೋಜ ವಂದಿಸಿದರು.

ವಾರ್ಷಿಕ ಪ್ರಶಸ್ತಿ ಪ್ರದಾನ : ಹಿರಿಯ ಪತ್ರಕರ್ತ ಮಹಂತೇಶ್ ಜ್ಞಾಪಕಾರ್ಥ ಕೊಡಮಾಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಯನ್ನು ಶಕ್ತಿ ದಿನಪತ್ರಿಕೆಯ ಸಿದ್ದಾಪುರದ ವರದಿಗಾರ ಎ.ಎನ್. ವಾಸು, ಎಂ.ಎನ್. ಚಂದ್ರಮೋಹನ್ ತಮ್ಮ ತಂದೆ ಎಂ. ನಾರಾಯಣ, ತಾಯಿ ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ವರದಿ ಪ್ರಶಸ್ತಿಯನ್ನು ಟಿವಿ೯ ವಾಹಿನಿ ಜಿಲ್ಲಾ ವರದಿಗಾರ ಐಮಂಡ ಗೋಪಾಲ್ ಸೋಮಯ್ಯ, ಹಿರಿಯ ಪತ್ರಕರ್ತ ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಬಿ.ವಿ. ಚಂದ್ರಶೇಖರ್, ತಾಯಿ ಪುಷ್ಪಲತಾ ಹೆಸರಿನಲ್ಲಿ ಸ್ಥಾಪಿಸಿರುವ ಮಾನವೀಯ ವರದಿ ಪ್ರಶಸ್ತಿಯನ್ನು ಸ್ಟಾರ್ ಆಫ್ ಮೈಸೂರು ಪತ್ರಿಕೆ ವರದಿಗಾರ ಆಕ್ಷಯ್ ಅವರುಗಳಿಗೆ ಪ್ರದಾನ ಮಾಡಲಾಯಿತು.

ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿಗೆ ಭಾಜನರಾದ ಜಗದೀಶ್ ಜೋಡುಬೀಟಿ, ಸಣ್ಣುವಂಡ ಕಿಶೋರ್ ನಾಚಪ್ಪ, ಪಿ.ಬಿ. ಅಕ್ಷಯ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪ್ರಶಸ್ತಿಗೆ ಭಾಜನರಾದ ಇಸ್ಮಾಯಿಲ್ ಕಂಡಕರೆ ಅವರನ್ನು ಸನ್ಮಾನಿಸಲಾಯಿತು.

ಮಹಾಸಭೆ

ಕಾರ್ಯಕ್ರಮಕ್ಕೂ ಮುನ್ನ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು. ಖಜಾಂಜಿ ಬೊಳ್ಳಜಿರ ಅಯ್ಯಪ್ಪ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷರುಗಳಾದ ಸುಬ್ರಮಣಿ, ಸಿ.ಪಿ. ತೇಜಸ್, ಸಂಘಟನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್ ಹಾಜರಿದ್ದರು.