ಕೂಡಿಗೆ, ಜೂ. ೨: ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ, ಮುತ್ತತ್ ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ಗ್ರಾಮ ದೇವತೆಯ ಹಬ್ಬದ ನಂತರ ಮುತ್ತತ್ ರಾಯ ದೇವರ ಹರಿಸೇವೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮುತ್ತತ್ ರಾಯ ದೇವರ ವಿಗ್ರಹವನ್ನು ಕಾವೇರಿ ನದಿಯಲ್ಲಿ ಗಂಗಾ ಸ್ನಾನ ನೆರವೇರಿಸಿ, ಪೂಜಾ ಕೈಂಕರ್ಯಗಳ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಗ್ರಹದ ಜೊತೆಯಲ್ಲಿ ಹರಿಸೇವೆಯ ಅಂಗವಾಗಿ ಪೂಜೆಗಳು ನಡೆದವು. ದೇವರಿಗೆ ಬಲಿ, ವಾಸ್ತುಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಸೋಮಶೇಖರ್, ಉಪಾಧ್ಯಕ್ಷ ಕೆ.ಎನ್. ಮಂಜುನಾಥ, ಕಾರ್ಯದರ್ಶಿ ಕೆ.ಎನ್. ಚಂದ್ರಶೇಖರ್, ಸಹ ಕಾರ್ಯದರ್ಶಿ ಕೆ.ಎನ್. ಶೇಖರ್ ಶೆಟ್ಟಿ, ಗೌರವ ಅಧ್ಯಕ್ಷ ಕೆ.ಟಿ. ಗಿರೀಶ್, ನಿಕಟಪೂರ್ವ ಅಧ್ಯಕ್ಷ ಕೆ.ಪಿ. ಸೋಮಣ್ಣ, ಕೆ.ಟಿ. ಶ್ರೀನಿವಾಸ್, ಕೆ.ಕೆ. ಭೀಮಣ್ಣ, ಸೇರಿದಂತೆ ನಿರ್ದೇಶಕರು, ಗ್ರಾಮಸ್ಥರು ಹಾಜರಿದ್ದರು.