ಸುಂಟಿಕೊಪ್ಪ ,ಜೂ. ೩ : ರಾಷ್ಟಿçÃಯ ಹೆದ್ದಾರಿಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಭಾನುವಾರ ಸ್ಕೂಟಿಗೆ ಇನ್ನೋವಾ ಕಾರು ಹಿಂಬದಿಯಿAದ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯವಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಸವಾರ ಭಾನುವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸಮೀಪದ ಕೆದಕಲ್ ಗ್ರಾಮದ ಏಳನೇ ಮೈಲು ನಿವಾಸಿ ಇಬ್ರಾಹಿಂ (೬೦) ಮೃತ ದುರ್ದೈವಿ. ಸುಂಟಿಕೊಪ್ಪದಿAದ ಕುಶಾಲನಗರದತ್ತ ತೆರಳುತ್ತಿದ್ದ ಸ್ಕೂಟಿಗೆ ಹಿಂಬದಿಯಲ್ಲಿ ಬರುತ್ತಿದ್ದ ಕೇರಳದ ಕಣ್ಣೂರಿನ ಇನ್ನೋವಾ ಕಾರು ಡಿಕ್ಕಿಪಡಿಸಿತ್ತು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಆಗಲಿದ್ದಾರೆ.