ವೀರಾಜಪೇಟೆ, ಜೂ. ೩: ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ೭ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಮಕ್ಕಳ ತಜ್ಞ ವೈದ್ಯ ಡಾ. ಆನಂದ್ (೫೩) ಮೈಸೂರಿನಲ್ಲಿ ನಿಧನರಾದರು.

ಕೆಲ ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಂತ್ಯ ಕ್ರಿಯೆಯು ತಾ. ೪ ರಂದು (ಇಂದು) ಬೆಳಿಗ್ಗೆ ೧೦ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

೨೦೧೭ ರಿಂದ ವೀರಾಜಪೇಟೆ ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಕ್ಕಳ ತಜ್ಞ ವೈದ್ಯ ಡಾ. ಆನಂದ್ ಅವರು ಸಾರ್ವಜನಿಕರಿಗೆ ಸದಾ ಸ್ಪಂದಿಸುವ ಮೂಲಕ ಉತ್ತಮ ವೈದ್ಯರೆಂದು ಜನವಲಯದಲ್ಲಿ ಗುರುತಿಸಿಕೊಂಡಿದ್ದರು. ಡಾ.ಆನಂದ್ ಅವರ ನಿಧನಕ್ಕೆ ವೀರಾಜಪೇಟೆ ಸಾರ್ವಜನಿಕ ಅಸ್ಪತ್ರೆಯ ಶಸ್ತçಚಿಕಿತ್ಸಕ ಡಾ.ವಿಶ್ವನಾಥ ಸಿಂಪಿ ಸಂತಾಪ ವ್ಯಕ್ತಪಡಿಸಿದ್ದಾರೆ.