ಮಡಿಕೇರಿ, ಜೂ. ೩: ನಗರದ ಸಾಯಿ ಮೈದಾನದ ಪಕ್ಕದ ರಸ್ತೆ ತಿರುವಿನಲ್ಲಿ ಬಿದ್ದಿದ್ದ ಕಾಂಕ್ರಿಟ್ ಅನ್ನು ನಗರಸಭಾ ಸಿಬ್ಬಂದಿ ಜೊತೆ ಸೇರಿ ವಾರ್ಡ್ನ ನಗರಸಭಾ ಸದಸ್ಯ ಅರುಣ್ ಶೆಟ್ಟಿ ತೆರವುಗೊಳಿಸಿದ್ದಾರೆ. ತಾರೀಕು ೩ರ ‘ಶಕ್ತಿ’ಯ ನಿಮ್ಮ ಪತ್ರ ವಿಭಾಗದಲ್ಲಿ ಹಲವರು ಈ ಬಗ್ಗೆ ದೂರು ಪ್ರಕಟಿಸಿದ್ದರು. ತಕ್ಷಣ ಸ್ಪಂದಿಸಿದ ಅರುಣ್ ಶೆಟ್ಟಿ ಅವರು ಪಾದಚಾರಿಗಳಿಗೆ ಮತ್ತು ವಾಹನ ಚಾಲಕರಿಗೆ ತೊಂದರೆ ಉಂಟಾಗುತ್ತಿದ್ದ ಕಾಂಕ್ರಿಟ್ ಅನ್ನು ತೆರವುಗಳಿಸಿದ್ದಾರೆ.