ಸುಂಟಿಕೊಪ್ಪ, ಜೂ. ೪: ಒಂದಲ್ಲ ಎರಡಲ್ಲಾ ಮೂರಲ್ಲಾ ಸತತ ನಾಲ್ಕು ದಿನ ಮದ್ಯದಂಗಡಿ ಬಂದ್. ಆದರೆ, ಸುಂಟಿಕೊಪ್ಪ ಮಾರುಕಟ್ಟೆಯ ಆವರಣದ ಒಳಗೆ ಬ್ರಾಂದಿ ತೊಟ್ಟೆಗಳದ್ದೇ ದರ್ಬಾರ್. ಈ ಮಾರುಕಟ್ಟೆಯಲ್ಲಿ ದಿನ ಬೆಳಿಗ್ಗೆ ಮದ್ಯ ಪ್ರಿಯರಿಗೆ ಎಣ್ಣೆ ಭಾಗ್ಯ ದೊರಕುತ್ತದೆ. ಚುನಾವಣೆ ಅಲ್ಲ; ಯಾವುದೇ ಮದ್ಯದ ಅಂಗಡಿ ಬಂದ್ ಆದರೂ ಈ ಮಾರುಕಟ್ಟೆ ಆವರಣದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಳ. ಆದರಂತೆ ಬೆಳಗ್ಗಿನ ಜಾವ ಕುಡಿಯುವವರ ಸಂಖ್ಯೆಯೂ ಜಾಸ್ತಿ ಯಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆ ಯಾಗಲಿ ಪೊಲೀಸ್ ಇಲಾಖೆಯಾಗಲಿ ಕಾಳಸಂತೆಯಲ್ಲಿ ಮಾರುವವರ ಬಗ್ಗೆ ತಲೆ ಕೆಡಿಸುತ್ತಿಲ್ಲ. ತಾ. ೪ರಂದು ಮಾರುಕಟ್ಟೆ ಆವರಣದಲ್ಲಿ ಪಾನಿ ಪ್ರಿಯರ ಖಾಲಿ ತೊಟ್ಟೆ ಗಳ ರಾಶಿ ಬಿದ್ದಿತ್ತು.

- ರಾಜು ರೈ