ಕೂಡಿಗೆ, ಜೂ. ೬: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ರಾಜ್ಯದ ಹೆದ್ದಾರಿಯ ರಸ್ತೆಗೆ ಹೊಂದಿಕೊAಡAತೆ ಇರುವ ಗ್ರಾಮದ ಉಪ ರಸ್ತೆಯ ಕಾಮಗಾರಿಗಳು ನಡೆದಿದ್ದು, ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಮಳೆಯ ನೀರು ರಸ್ತೆಯ ಸಮೀಪದ ಮನೆಗಳಿಗೆ ನುಗ್ಗಿದೆ.

ಹೆಬ್ಬಾಲೆ ಸರಕಾರಿ ಬಸ್ ನಿಲ್ದಾಣದ ಕಡೆಯಿಂದ, ಮತ್ತು ಸಮೀಪದ ಮಾರುಕಟ್ಟೆ ಕಡೆಯಿಂದ ಮಳೆಯ ನೀರು ರಸ್ತೆಯ ಅಂಚಿನಲ್ಲಿರುವ ಶಿವಣ್ಣ, ಮತ್ತು ಕೃಷ್ಣ ಎಂಬವರ ಮನೆಗಳಿಗೆ ನುಗ್ಗಿ ಮನೆಯಲ್ಲಿನ ಸಾಮಗ್ರಿಗಳಿಗೆ ಹಾನಿಯಾಗಿದೆ.