ವೀರಾಜಪೇಟೆ, ಜೂ. ೯: ಪತಿ ಪತ್ನಿ ನಡುವೆ ಕಲಹ ಏರ್ಪಟ್ಟು ಪತಿ ನೇಣಿಗೆ ಶರಣಾದ ಘಟನೆ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಪಂಚವಳ್ಳಿ ಹೆಚ್.ಆರ್ ಕಾವಲ್ ನಿವಾಸಿ, ವೀರಾಜಪೇಟೆ ಅಮ್ಮತ್ತಿ ಕಾರ್ಮಾಡು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಗಾರೆ ಮೇಸ್ತಿç ಟಿ.ಎನ್.ರವಿ (೪೦) ನೇಣಿಗೆ ಶರಣಾದ ವ್ಯಕ್ತಿ. ರವಿ ಹಾಗೂ ಪತ್ನಿ ರಾಧಾ ನಡುವೆ ಕೆಲವು ದಿನಗಳಿಂದ ವೈಮನಸ್ಸು ಏರ್ಪಟ್ಟು, ಆಗಾಗ ಕಲಹಗಳು ನಡೆದಿವೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಇಂದು ಪತ್ನಿ ರಾಧ ಸನಿಹದಲ್ಲಿರುವ ತವರು ಮನೆಗೆ ತೆರಳಿದ್ದ ಸಂದರ್ಭ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ರಾಧ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.