ನಾಪೋಕ್ಲು, ಜೂ. ೯: ಸಮೀಪದ ಮರಂದೋಡ ಶಕ್ತಿ ಕೇಂದ್ರದಿAದ ಬಿಜೆಪಿ ಕಾರ್ಯಕರ್ತರು ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಿಯಲ್ಲಿ ನರೇಂದ್ರ ಮೋದಿ ೩ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೆ ಸುಸೂತ್ರವಾಗಿ ನಡೆಯಬೇಕು ಹಾಗೂ ದೇಶದ ಸುಭಿಕ್ಷೆಗೊಳ್ಳಬೇಕು ಎಂದು ಪೂಜೆ ಸಲ್ಲಿಸಿದರು.

ಈ ಸಂದರ್ಭ ಚಂಡೀರ ಜಗದೀಶ್, ಚಂಡೀರ ಮುದ್ದಪ್ಪ, ಬೂತ್ ಮಟ್ಟದ ಕಾರ್ಯದರ್ಶಿ ಬಾರಿಕೆ ನಂದ ಮತ್ತು ಯುವ ಮೋರ್ಚಾ ಪದಾಧಿಕಾರಿಗಳಾದ ಚಂಡೀರ ರೋಷನ್, ಮೇರಿಯಂಡ ಆದೇಶ್ ಬೋಪಯ್ಯ, ಮಾರ್ಚಂಡ ಪಳಂಗಪ್ಪ. ಚಂಡೀರ ವಿಜಯ್, ಚಂಡೀರ ನಂದ, ಮೇರಿಯಂಡ ನೀತಾ ಆದೇಶ್, ಕೋಲೆಯಂಡ ಅಶೋಕ್ ಹಾಗೂ ಗ್ರಾಮಸ್ಥರು ಹಾಜರಿದ್ದರು. ದೇವಾಲಯದ ಮುಖ್ಯ ಅರ್ಚಕ ಕುಶ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.