ಸುಂಟಿಕೊಪ್ಪ,ಜೂ.೯: ಸುಂಟಿಕೊಪ್ಪ ಸಂತೆ ದಿನವಾದ ಭಾನುವಾರ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸಿದ್ದತೆ ನಡೆಸುತ್ತಿರುವ ಸಂದರ್ಭ ಪೆಟ್ಟಿಗೆ ಯೊಂದರಲ್ಲಿ ಗೋದಿ ನಾಗರ ಸೇರಿಕೊಂಡು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿತ್ತು.

ಇರ್ಫಾನ್ ಎಂಬವರು ಬೆಳಿಗ್ಗೆ ೮ ಗಂಟೆಗೆ ಮಾರುಕಟ್ಟೆಯಲ್ಲಿ ಎಂದಿನAತೆ ಪ್ಲಾಸ್ಟಿಕ್ ಟ್ರೇಗಳನ್ನು ಜೋಡಿಸಲು ಮುಂದಾಗಿದ್ದರು. ಈ ವೇಳೆ ಒಂದು ಟ್ರೇನಲ್ಲಿ ಗೋದಿ ನಾಗರಹಾವು ಮಲಗಿದ್ದುದು ಕಂಡು ಬಂತು. ಸುಂಟಿಕೊಪ್ಪ ಪಂಪ್‌ಹೌಸ್ ರಸ್ತೆಯ ನಿವಾಸಿ ಉರಗ ಪ್ರೇಮಿ ವಿ.ಕೆ.ರಾಜ ಮಾಹಿತಿ ತಿಳಿಯುತ್ತಿದ್ದಂತೆ, ಸ್ಥಳಕ್ಕಾಗಮಿಸಿ ಉರಗವನ್ನು ಸೆರೆ ಹಿಡಿದು ಆನೆಕಾಡು ಅರಣ್ಯಕ್ಕೆ ಬಿಟ್ಟರು.