ಸುಂಟಿಕೊಪ್ಪ, ಜೂ.೯: ೭ನೇ ಹೊಸಕೋಟೆ ರಾಷ್ಟಿçÃಯ ಹೆದ್ದಾರಿ ಬದಿಯ ಕಾಫಿ ತೋಟದಿಂದ ಬೆಳ್ಳಂಬೆಳಿಗ್ಗೆ ಕಾಡಾನೆಗಳು ಹೆದ್ದಾರಿಯಲ್ಲಿ ಮನಸೋ ಇಚ್ಛೆ ಸಂಚರಿಸಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು.

ಭಾನುವಾರದಂದು ಬೆಳಿಗ್ಗೆ ೬.೪೫ ರ ಸುಮಾರಿಗೆ ೭ನೇ ಹೊಸಕೋಟೆ ನಿವಾಸಿ ಜುನಾಯಿತ್ ಎಂಬವರು ಮಸೀದಿಗೆ ತೆರಳಿ ವಾಪಾಸ್ಸಾಗುತ್ತಿದ್ದ ಸಂದರ್ಭ ಏಕಾಏಕಿ ಕಾಫಿ ತೋಟ ದಿಂದ ಬಂದ ಕಾಡಾನೆ ಕಾರಿನ ಮೇಲೆ ದಾಳಿ ನಡೆಸಿದೆ. ಈ ಸಂದರ್ಭ ಜುನಾಯಿತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇದೇ ಸಂದರ್ಭ ಮತ್ತೊಂದು ಕಾಡಾನೆಯು ರಾಷ್ಟಿçÃಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಸಂಚರಿಸಿ ಘೀಳಿಟ್ಟು ಪಕ್ಕದ ತೋಟದೊಳಕ್ಕೆ ತೆರಳಿದೆ. ಕೊಡಗರಹಳ್ಳಿ ಮತ್ತು ಉಪ್ಪುತೋಡು ೭ನೇ ಹೊಸಕೋಟೆ ಹಾಗೂ ಕಂಬಿಬಾಣೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮೀತಿ ಮಿರಿದ್ದು ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು, ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ.